ಚಾ ಕಪ್ನಲ್ಲಿ ಉಚ್ಚಿಲ ಮಹಾಲಕ್ಷ್ಮಿ ಫೋಟೋ ಬಳಕೆ ಸರಿಯಾದದ್ದಲ್ಲ-
ಸಾಮಾಜಿಕ ಕಾರ್ಯಕರ್ತ ರಾಜ್ ಗಣೇಶ್ ರಾಜ್ ಸರಳೇಬೆಟ್ಟು
ಉಡುಪಿ-ಉಡುಪಿ ಮಹಾಲಕ್ಷ್ಮಿ ಕಾರ್ಪೊರೇಟಿವ್ ಬ್ಯಾಂಕ್ ನ ಈ ಬಾರಿ ಎಸ್ ಎಸ್ ಎಲ್ ಸಿ. ಪಿಯುಸಿ ಮತ್ತು ಡಿಗ್ರಿ ಕಲಿಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಹಾಯದ ಜೊತೆಗೆ ಚಾ ಕುಡಿಯುವ ಕಪ್ಪನ್ನ ನೀಡುವುದರ ಜೊತೆಗೆ ಸೈನಿಸಿಕೊಂಡಿರಬಹುದು. ಆದರೆ ಉಚ್ಚಿಲ ಮಹಾಲಕ್ಷ್ಮಿಯ ದೇವಸ್ಥಾನ ದೇವಿಯ ಪೋಟೋ ಚಹಾದ ಕಪ್ಪಿನಲ್ಲಿ ಅಳವಡಿಸಿರುವುದು . ಮತ್ತು ಚಹಾ ಕುಡಿಯುವಾಗ. ಕಪ್ನ ಭಾಗದಲ್ಲಿಯೇ ಚಹಾ ಸಿಪ್ ಮಾಡುವಾಗ ಬಾಯಿಯ ಎಂಜಲು ಫೋಟೋ ಗೆ ತಾಗುತ್ತದೆ.. ಹೀಗಿರುವಾಗ ಬ್ಯಾಂಕಿನ ಜಾಹೀರಾತಿನೊಂದಿಗೆ. ದೇವರ ಫೋಟೋ ಅಳವಡಿಸುವುದು ಸದ್ಭಕ್ತರಲ್ಲಿ ಸಂಕೋಚ ಮೂಡುತ್ತದೆ ಉಪಯೋಗಿಸಲು ಈ ಚಹಾದ ಕಪ್ ಉಪಯೋಗಕ್ಕೆ ಬಾರದಂತಾಗಿದೆ, ಏಕೆಂದರೆ ತುಳುನಾಡಿನಲ್ಲಿ ಹೆಚ್ಚಿನ ನವರ ಅಂದರೆ ಮೋಗವೀರ ಜನಾಂಗದ ಆರಾಧ್ಯ ದೇವತೆ ಶ್ರೀ ಉಚ್ಚಿಲ ಮಹಾಲಕ್ಷ್ಮಿ ಅಮ್ಮವರು,ಭಕ್ತರ ಸಂಖ್ಯೆ ಜಾಸ್ತಿ ಇದೆ. ಚಹದ ಕಪ್ಪಿನಲ್ಲಿ ಫೋಟೋ ಅಳವಡಿಸಿರುವುದು ಸದ್ಭಕ್ತರಿಗೆ ನೋವು ಉಂಟಾಗಿದೆ..ಎಂದು ಬ್ಯಾಂಕಿನ ಶೇರ್ ಹೋಲ್ಡರ್ ಸಾಮಾಜಿಕ ಕಾರ್ಯಕರ್ತ ರಾಜ್ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಫಲಾನುಭವಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.