• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Tuesday, July 8, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಮುಂಗಾರು ಪ್ರಕೃತಿ ವಿಕೋಪ ಹಾನಿ ಹಾಗೂ ಪರಿಹಾರ ವಿಕೋಪಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆ ನೀಡಿದ ಸಚಿವ ಮಾಂಕಳ ವೈದ್ಯ

Kannada News Desk by Kannada News Desk
June 12, 2024
in ಉತ್ತರ ಕನ್ನಡ
0
ಮುಂಗಾರು ಪ್ರಕೃತಿ ವಿಕೋಪ ಹಾನಿ ಹಾಗೂ ಪರಿಹಾರ ವಿಕೋಪಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆ ನೀಡಿದ ಸಚಿವ ಮಾಂಕಳ ವೈದ್ಯ
0
SHARES
204
VIEWS
WhatsappTelegram Share on FacebookShare on TwitterLinkedin
https://kannadatodaynews.net/wp-content/uploads/2024/06/VID-20240612-WA0705.mp4

 

ಮುಂಗಾರು ಪ್ರಕೃತಿ ವಿಕೋಪ ಹಾನಿ ಹಾಗೂ ಪರಿಹಾರ ವಿಕೋಪಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆ ನೀಡಿದ ಸಚಿವ ಮಾಂಕಳ ವೈದ್ಯ

ಭಟ್ಕಳ: ಭಟ್ಕಳ ತಾಲೂಕಾ ಆಡಳಿತ ಸಹಾಯಕ ಆಯುಕ್ತರ ಕಛೇರಿಯಲ್ಲಿ ಮುಂಗಾರು ಪ್ರಕೃತಿ ವಿಕೋಪ ಹಾನಿ ಹಾಗೂ ಪರಿಹಾರ ವಿಕೋಪಕ್ಕೆ ಸಂಬಂಧಿಸಿದಂತೆ ಇಂದು ಭಟ್ಕಳ ಮತ್ತು ಹೊನ್ನಾವರ ತಾಲ್ಲೂಕಿನ ಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವ ಮಂಕಾಳ ಎಸ್ ವೈದ್ಯ ಸಭೆ ನಡೆಸಿದರು. ಸಭೆಯಲ್ಲಿ ಇಲಾಖಾವಾರು ಅಧಿಕಾರಿಗಳಿಗೆ ಮಳೆಗಾಲದ ಪೂರ್ವ ತಯಾರಿಯ ಕುರಿತಂತೆ ಆಯಾ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಕಾಮಗಾರಿಯ ಪ್ರಗತಿಯ ಕುರಿತಂತೆ ಕೇಳಿದ ಸಚಿವರು, ಸಮಂಜಸವಾಗಿ ಉತ್ತರ ನೀಡದ ಅಧಿಕಾರಗಳ ಬಗ್ಗೆ, ಕಾಮಗಾರಿಯಲ್ಲಾಗುತ್ತಿರು ವಿಳಂಬ ನೀತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ ಕಾಮಗಾರಿ ಅರ್ಧಕ್ಕೆ ನಿಂತಿರುವುದರ ಬಗ್ಗೆ ಭಟ್ಕಳ ಆರೋಗ್ಯಾಧಿಕಾರಿಗಳು ಸಚಿವರ ಗಮನಕ್ಕೆ ತರಲಾಗಿದ್ದು ಸಚಿವರು ವಾರ್ಡ ಕಾಮಾಗಾರಿಯನ್ನು ಸಂಪೂರ್ಣಗೊಳಿಸಿಕೊಡುವ ಭರವಸೆ ನೀಡಿದರು. ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದ್ದು ಮುಂಗಾರು ಮಳೆ ಪ್ರರಂಭವಾಗಿ ಕೃಷಿ ಚಟುವಟಿಕೆಗಳು ಶುರುವಾಗಿರುವುದರಿಂದ ರೈತರಿಗೆ ಬಿತ್ತನೆ ಬಿಜಗಳನ್ನು ನೀಡುತ್ತಿರುವುದಾಗಿ ಭಟ್ಕಳ ಕೃಷಿ ಇಲಾಖೆಯ ಅಧಿಕಾರಿಗಳು ಹೇಳಿದಾಗ ನಮಗೆ ಊಟ ಸಿಗುತ್ತಿರುವುದು ರೈತರಿಂದ ಅಂತಹ ರೈತರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಿ ಎಂದರು.

ಮುಂಗಾರು ಮಳೆ ಪ್ರಾರಂಭವಾಗಿ ವಾರ ಕಳೆದರೂ ಪುರಸಭೆ ವ್ಯಾಪ್ತಿಯಲ್ಲಿ ಇನ್ನೂ ಕೂಡ ಗಟಾರ ಸ್ವಚ್ಛಗೊಳಿಸುವ ಕೆಲಸ ಪೂರ್ಣಗೊಳ್ಳದ ಹಾಗೂ ಬೀದಿ ದೀಪ ಅಳವಡಿಸುವ ವಿಚಾರದಲ್ಲಿ ಸ್ಪಷ್ಟ ಲೆಕ್ಕಾಚಾರ ನೀಡುವಲ್ಲಿ ಗೊಂದಲಗೊಂಡ ಹಿನ್ನೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದಷ್ಟು ಬೇಗ ಗಟಾರಗಳನ್ನು ಸ್ವಚ್ಛಗೊಳಿಸುವಂತೆ ಆದೇಶ ನೀಡಿದರು.

ಮುಟ್ಟಳ್ಳಿಯಲ್ಲಿನ ನಾಲ್ಕೈದು ಮನೆಗಳು ಗುಡ್ಡ ಕುಸಿತದ ಬೀತಿಯನ್ನು ಎದುರಿಸುತ್ತಿದ್ದು ಮನೆ ಖಾಲಿ ಮಾಡಿಸುವಲ್ಲಿ ಅಧಿಕಾರಗಳು ಇನ್ನೂ ಯಶಸ್ವಿಯಾಗಿಲ್ಲ. ಗುಡ್ಡಕುಸಿತಕ್ಕೆ ಪರಿಹಾರವಾಗಿ ತಡೆಗೊಡೆಯ ಅವಶ್ಯಕತೆ ಇದೆ. ಆದರೆ ತಡೆಗೋಡೆ ನಿರ್ಮಿಸಲು 7 ಕೋಟಿ ಹಣದ ಅವಶ್ಯಕತೆ ಇದೆ. ಈ ನಡುವೆ ಅಪಾಯದ ಅಂಚಿನಲ್ಲಿರುವ ಮನೆಯವರು ಅದರ ಬದಲಾಗಿ ನಾಲ್ಕೈದು ಮನೆಗಳಿಗೆ ನೇರವಾಗಿ ಮನೆ ಕಟ್ಟುವಾಗ ವ್ಯಯಿಸಿದ 20 – 25 ಲಕ್ಷ ಮೊತ್ತವನ್ನು ನೀಡಿದರೆ ತಾವೂ ಮನೆಯನ್ನು ಬಿಡುತ್ತೇವೆ ಎಂಬ ಸೂತ್ರ ಮುಂದಿಟ್ಟಿದ್ದಾರೆಂದು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಭಟ್ಕಳ ಸಿಟಿ ಸರ್ವೆಗೆ ಆದೇಶ ನೀಡಿ ಮೂರ್ನಾಲ್ಕು ತಿಂಗಳು ಕಳೆದರು ಪೂರ್ಣಗೊಳಿಸದೆ, ಇಲಾಖೆ ಸಂಬಂಧಪಟ್ಟ ಸರ್ವೆಯನ್ನು ಮಾಡಿಕೊಡದ ಹಿನ್ನೆಲೆಯಲ್ಲಿ ಸರ್ವೆ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಸರ್ವೆ ಇಲಾಖೆಯಲ್ಲಿ 15 ಜನ ಸಿಬ್ಬಂಧಿಗಳನ್ನು ಒದಗಿಸಿಕೊಟ್ಟರೂ ನಿಮಗೆ ಕೆಲಸ ಮಾಡಲು ಮನಸ್ಸಿಲ್ಲ, ಸಿಟಿ ಸರ್ವೆ ಆಗದಿರುವ ಕಾರಣಕ್ಕೆ ಬಡವರು ತಮ್ಮ ಜಾಗವನ್ನು ಸುಲಭವಾಗಿ ಕೃಷಿಯೇತರ ಜಮೀನಾಗಿ ಪರಿವರ್ತಿಸಲು ಸಾಧ್ಯವಾಗುತ್ತಿಲ್ಲ, ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಏಜೆಂಟರು ಬಂದರೆ ಸಂಜೆ 6 ಘಂಟೆಯ ನಂತರವು ಕಛೇರಿಯಲ್ಲಿ ಕುಳಿತು ಕೆಲಸಮಾಡಿಕೊಡುತ್ತಾರೆ ಎಂಬ ದೂರು ಕೇಳಿಬರುತ್ತಿದೆ. ಇದಕ್ಕೆಲ್ಲ ಅವಕಾಶ ಮಾಡಿಕೊಡದೆ, ಬಡವರು ಬಂದರೆ ಅವರನ್ನು ಕೂಡಿಸಿ ಮಾತನಾಡಿಸಿ ತಿಳುವಳಿಕೆ ನೀಡಿ ಕೆಲಸ ಮಾಡಿಕೊಡಿ ಆ ದೇವರು ನಿಮಗೆ ಒಳ್ಳೆದು ಮಾಡುತ್ತಾನೆ. ನೀವು ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸದರೆ ನಾನು ಕೂಡ ನಿಮಗೆ ಬೆಂಬಲವಾಗಿ ಇರುತ್ತೆನೆ ಎಂದು ಸಚಿವರು ಹೇಳಿದರು..

ಈ ಸಂದರ್ಭದಲ್ಲಿ ಸಭೆಯಲ್ಲಿ ಭಟ್ಕಳ ಸಹಾಯಕ ಆಯುಕ್ತೆ ಡಾ.ನಯನ, ಭಟ್ಕಳ ತಹಸೀಲ್ದಾರ್ ನಾಗರಾಜ ನಾಯ್ಕಡ, ಹೊನ್ನಾವರ ತಹಶೀಲ್ದಾರ್ ಶ್ರೀಧರ ದೀಕ್ಷಿತ್, ಭಟ್ಕಳ , ಹೊನ್ನಾವರ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related

Previous Post

ಮಂಗಳೂರಿನಲ್ಲಿ ನಡು ರಸ್ತೆಯಲ್ಲಿ ಕೈ ಕೊಟ್ಟ BMW ಕಾರು- 2 ಜನ ಮುಸ್ಲಿಂ ಯುವಕರ ಜೊತೆ ಸಿಕ್ಕಿ ಬಿದ್ದ ಹಿಂದೂ ಯುವತಿ

Next Post

ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಣೆ-ಕಾರವಾರದ ಕದ್ರಾ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಸಂತೋಷ ಲಮಾಣಿ ಬಂಧನ

Kannada News Desk

Kannada News Desk

Next Post
ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಣೆ-ಕಾರವಾರದ ಕದ್ರಾ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಸಂತೋಷ ಲಮಾಣಿ ಬಂಧನ

ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಣೆ-ಕಾರವಾರದ ಕದ್ರಾ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೆಬಲ್ ಸಂತೋಷ ಲಮಾಣಿ ಬಂಧನ

Please login to join discussion

ಕ್ಯಾಲೆಂಡರ್

July 2025
M T W T F S S
 123456
78910111213
14151617181920
21222324252627
28293031  
« Jun    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.