ಭಟ್ಕಳ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ 12 ಕೋಟಿ ರೂಪಾಯಿಗಳ ಅನುದಾನ ಮಂಜೂರು ಮಾಡಿಸಿದ ಸಚಿವ ಮಾಂಕಾಳ ವೈದ್ಯರಿಗೆ ಭಟ್ಕಳ ವಕೀಲರ ಸಂಘದಿಂದ ಸನ್ಮಾನ
ಭಟ್ಕಳ-ಭಟ್ಕಳ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ವಿಶೇಷ ಮುತುವರ್ಜಿ ವಹಿಸಿ ೧೨ ಕೋಟಿ ರೂಪಾಯಿಗಳ ಅನುದಾನ ಮಂಜೂರಿ ಮಾಡಿಸಿದ ಭಟ್ಕಳ ಶಾಸಕರು ಮತ್ತು ಸಚಿವರಾದ ಶ್ರೀ ಮಂಕಾಳ ವೈದ್ಯರನ್ನು ಅವರ ಗೃಹ ಕಚೇರಿಯಲ್ಲಿ ಭಟ್ಕಳ ವಕೀಲರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಹಿರಿಯ ವಕೀಲರಾದ ರವೀಂದ್ರ ಶ್ರೇಷ್ಟಿ, ಎಮ್. ಎಲ್. ನಾಯ್ಕ, ಸಂಘದ ಅಧ್ಯಕ್ಷರಾದ ಗಣೇಶ ದೇವಾಡಿಗ ಮತ್ತಿತರರು ಭಟ್ಕಳ ವಕೀಲರ ಪರವಾಗಿ ಸಚಿವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
ನ್ಯಾಯಾಲಯದ ವಸತಿ ಸಂಕಿರ್ಣಕ್ಕಾಗಿ ಇನ್ನೂ ಹೆಚ್ಚುವರಿ ೨.೫ ಕೋಟಿ ರೂಪಾಯಿಗಳನ್ನು ಮಂಜೂರಿ ಮಾಡಿಸುವುದಾಗಿ ಹಾಗೂ ನ್ಯಾಯಾಲಯದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ಸಹಕಾರ ನೀಡುವುದಾಗಿ ಸಚಿವರು ಈ ಸಮಯದಲ್ಲಿ ಭರವಸೆ ನೀಡಿದರು.