• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Tuesday, October 21, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊನೆಗೌಡರಿಗೆ ಉಚಿತ 10 ಲಕ್ಷ ರೂಪಾಯಿ ವಿಮೆ ಪಾಲಿಸಿ ಕೊಡುಗೆ

Kannada News Desk by Kannada News Desk
January 30, 2025
in ಉತ್ತರ ಕನ್ನಡ
0
ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊನೆಗೌಡರಿಗೆ ಉಚಿತ 10 ಲಕ್ಷ ರೂಪಾಯಿ ವಿಮೆ ಪಾಲಿಸಿ ಕೊಡುಗೆ
0
SHARES
135
VIEWS
WhatsappTelegram Share on FacebookShare on TwitterLinkedin

ಶಿರಸಿ : ಮನುಷ್ಯನಿಗೆ ಜೀವ ಮತ್ತು ಜೀವನ ಇವೆರಡೂ ಮುಖ್ಯವಾಗಿದೆ. ಇವೆರಡರ ಮಧ್ಯದಲ್ಲಿ ಬಡವರ ಬದುಕುಯಾವತ್ತೂ ಕಷ್ಟಕರವಾಗಿದೆ‌. ಆರ್ಥಿಕವಾಗಿ ದುರ್ಬಲರಾಗಿರುವ ಶ್ರಮಜೀವಿಗಳ ಒಳಿತಿಗಾಗಿ, ಅವರ ಕುಟುಂಬದ ಹಿತವನ್ನು ಯೋಚಿಸಿ ಅನಂತಮೂರ್ತಿ ಹೆಗಡೆ ಅವರು ಕೈಗೊಂಡಿರುವ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಸಾಮಾಜಿಕ ಮುಖಂಡ ಎನ್.ಎಸ್.ಹೆಗಡೆ ಕರ್ಕಿ ಹೇಳಿದರು.

ಅವರು ಬುಧವಾರ ಶಿರಸಿಯ ಟಿಆರ್ಸಿ ಸಭಾಂಗಣದಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊನೆಗೌಡರಿಗೆ ಉಚಿತ 10 ಲಕ್ಷ ರೂಪಾಯಿ ಇಂಡಿಯನ್ ಪೋಸ್ಟ್ ಆಫೀಸ್ ಗ್ರುಪ್ ಎಕ್ಸಿಡೆಂಟ್ ಇನ್ಶುರೆನ್ಸ್ ಪಾಲಿಸಿ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿನ ಬಡವರನ್ನು, ಆರ್ಥಿಕವಾಗಿ ದುರ್ಬಲರನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದೆ ನಿಟ್ಟಿನಲ್ಲಿ ಅನಂತಮೂರ್ತಿ ಹೆಗಡೆ ಅವರ ಸಾಮಾಜಿಕ ಬದ್ಧತೆಯನ್ನೂ ಮೆಚ್ಚಬೇಕು.‌ಅವರ ಕಾರ್ಯಕ್ಕೆ ಸಮಾಜ ಸ್ಪಂದಿಸಬೇಕು. ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಅವರು ಕೊನೆಗೌಡರಿಗೆ ಒಂದು ವರ್ಷದ ವಿಮೆಯನ್ನು ಮಾಡಿಕೊಡುತ್ತಿದ್ದಾರೆ. ಆದರೆ ನಂತರದ ವರ್ಷದಲ್ಲಿ ಆಯಾ ಜನರೇ ಮುಂದುವರೆಸಿಕೊಂಡು ಹೋಗಬೇಕು ಎಂದರು.

ಕಾರ್ಯಕ್ರಮದ ರೂವಾರಿ, ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಮಾತನಾಡಿ, ಯಾವ ಕೃಷಿಕನೂ ನಮ್ಮ ಮನೆಗೆ ಬಂದ ಕೆಲಸದವನ ಮರಣ ಬಯಸುವುದಿಲ್ಲ. ಅದೇ ರೀತಿ ಕೆಲಸಗಾರನೂ ಸಹ ತಾನು ಸಾಯಬೇಕೆಂದು ಮರ ಏರುವುದಿಲ್ಲ. ಆ ಘಟನೆ ನಡೆಯುವುದು ಆಕಸ್ಮಿಕ. ಆದರೆ ಅದರ ಪರಿಣಾಮ ಮಾತ್ರ ತೀರಾ ಕಷ್ಟ. ಕಳೆದ ವರ್ಷವೂ ಸಹ ನಮ್ಮ ಭಾಗದಲ್ಲಿ ಅನೇಕ ಕೊನೆಗೌಡರು ಬಿದ್ದು, ಮೃತರಾಗಿದ್ದಾರೆ. ನಂತರಿ ಆ ಕಟುಂಬದ ಪರಿಸ್ಥಿತಿ ಜೀವನ ನಿರ್ವಹಣೆಯಲ್ಲಿ ಕಷ್ಟವಾಗಿದ್ದು ನಮಗೆ ಕಾಣುತ್ತದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಜಿಲ್ಲೆಯ ಅನೇಕ ಕಡೆಗಳಲ್ಲಿ ನನ್ನ ಟ್ರಸ್ಟ್ ವತಿಯಿಂದ ಈ ಯೋಜನೆಯ ಮೂಲಕ ಅನೇಕರಿಗೆ ಅನುಕೂಲ ಮಾಡಿದ್ದಾಗಿತ್ತು. ಅದರಿಂದ ಅನೇಕರಿಗೆ ವಿವಿಧ ರೀತಿಯಲ್ಲಿ ಅನುಕೂಲಗಳಾಗಿವೆ.

ಅದೇ ರೀತಿಯಲ್ಲಿ ಈ ವರ್ಷವೂ ಸಹ ಇಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿ ನಾನು ಮಾಡಿಸಿಕೊಡುತ್ತೇನೆ. ಆದರೆ ಮುಂದಿನ ವರ್ಷದಿಂದ ತಾವುಗಳೇ ಇದನ್ನು ರಿನಿವಲ್ ತಪ್ಪದೇ ಮಾಡಿಕೊಳ್ಳಬೇಕು ಎಂದರು. ಜೀವಕ್ಕೆ ಕಂಟಕವಾಗಿರುವ ಅಡಕೆ ಮರ ಹತ್ತುವ ಬದಲು ಸಾಧ್ಯವಾದರೆ ದೋಟಿಯ ಮೂಲಕ ಅಡಕೆ ಕೊನೆ ಕೊಯ್ಯುವ ವೃತ್ತಿಯನ್ನು ಮುಂದುವರೆಸುವುದು ಎಲ್ಲ ದೃಷ್ಟಿಯಿಂದ ಅನುಕೂಲಕರ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಹಕಾರಿ, ಟಿಆರ್ಸಿ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ಮಾತನಾಡಿ, ಮಲೆನಾಡ ಭಾಗದಲ್ಲಿ ಕೊನೆಕೊಯ್ಯುವ ಕೊನೆಗೌಡ ಬಿದ್ದು ಸಾವನ್ನಪ್ಪಿರುವ ಘಟನೆ ಈ ಹಿಂದಿನಿಂದಲೂ ನಡೆಯುತ್ತಿದೆ. ಇದು ಕೊನೆಗೊಳ್ಳಬೇಕು. ಮತ್ತು ಇದರಿಂದ ಕೊನೆಗೌಡರಿಗೆ ಮತ್ತು ತೋಟದ ಯಜಮಾನ ಇಬ್ಬರಿಗೂ ಕಷ್ಟ. ಅನಂತಮೂರ್ತಿ ಹೆಗಡೆ ಅವರು ಯೋಜಿಸಿರುವ ಈ ಪಾಲಿಸಿಯಿಂದ ಅನೇಕ ಶ್ರಮಿಕ ವರ್ಗಕ್ಕೆ ಅನುಕೂಲಕರವಾಗಲಿದೆ. ಇದೊಂದು ಪುಣ್ಯದ ಕೆಲಸ. ದುಡ್ಡು ಇದ್ದವರು ಬಹುತೇಕರು ದುಂದುವೆಚ್ಚ ಮಾಡುತ್ತಾರೆ. ಈ ರೀತಿ ಪುಣ್ಯಕಾರ್ಯಕ್ಕೆ ದಾನ ಮಾಡುವುದು, ಸಮಾಜಕ್ಕೆ ಅನುಕೂಲಕರವಾಗುವ ಕೆಲಸ ಮಾಡುವವರ ಸಂಖ್ಯೆ ತೀರಾ ವಿರಳ. ಈ ವಿಚಾರದಲ್ಲಿ ಅನಂತಮೂರ್ತಿ ಹೆಗಡೆ ಅವರ ಕಾರ್ಯ ಶ್ಲಾಘನೀಯ. ಅವರ ಒಳ್ಳೆಯ ವಿಚಾರಕ್ಕೆ ನಾನು ಸದಾ ಜೊತೆ ಇರುವುದಾಗಿ ಹೇಳಿದರು.

ಭಾರತೀಯ ಅಂಚೆ ಇಲಾಖೆಯ ವಿಬಾಗ ಅಧೀಕ್ಷಕ ಹೂವಪ್ಪ ಮಾತನಾಡಿ, ಭಾರತೀಯ ಅಂಚೆ ಇಲಾಖೆಯಲ್ಲಿ ಸಾಕಷ್ಟು ಯೋಜನೆಗಳಿವೆ. ಬಡವರಿಗೆ ಅನುಕೂಲಕರವಾಗುವ ಅನೇಕ ಯೋಜನೆಗಳು ಈಗೀಗ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಸಮಾಜ ಕಾರ್ಯಕ್ಕಾಗಿ ಅನಂತಮೂರ್ತಿ ಹೆಗಡೆ ಅವರ ಕೆಲಸ ಸಂತಸ ತಂದಿದೆ.ಬಡವರ ಕುಟುಂಬಕ್ಕೆ ಅನುಕೂಲವಾರಗಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಡಿಮೆ ಸಂಪಾದನೆ ಮಾಡುವ ಜನರಿಗೆ ಸುರಕ್ಷೆ ನೀಡು ಕೆಲಸ ಮಾಡುತ್ತಿದೆ. ನಮ್ಮ ಕುಟುಂಬದ ಸುರಕ್ಷಗೆ ಕಡಿಮೆ ಗಮನವನ್ನು ನೀಡುತ್ತಿದ್ದೇವೆ. ಹಣ ನೀಡುವುದು ಮುಖ್ಯವಲ್ಲ. ಬದಲಾಗಿ ಅದು ಯಾರಿಗೆ ಅವಶ್ಯಕತೆ ಇದೆಯೋ, ಅವರಿಗೆ ತಲುಪುವಂತಾಗಬೇಕು. ಜನರೂ ಸಹ ಭಾರತೀಯ ಅಂಚೆ ಇಅಲಖೆಯ ಸೇವೆಗಳನ್ನು, ಯೋಜನೆಗಳನ್ನು ಹೆಚ್ಚು ಬಳಸಬೇಕೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೃಷಿಕ ವಿ.ಎಂ.ಹೆಗಡೆ ಕಬ್ಬೆ, ಅನಂತಮೂರ್ತಿ ಹೆಗಡೆ ಅವರ ಈ ಸಾಮಾಜಿಕ ಕೆಲಸ ನಿಜಕ್ಕೂ ನಾವೆಲ್ಲರೂ ಮೆಚ್ಚಬೇಕು. ಕಳೆದ ಕೆಲ ದಿನದ ಹಿಂದೆ ನಮ್ಮ ಮನೆ ಅಡಕೆ ಕೊಯ್ಯುವಾಗ ಕೊನೆಗೌಡ ಬಿದ್ದು ಮೃತನಾಗಿದ್ದಾನೆ. ಆ ಕುಟುಂಬದ ಗೋಳು ತೀರಾ ದುಃಖಕರ. ಮತ್ತು ಆರ್ಥಿಕವಾಗಿ ಅದು ತೋಟದ ಯಜಮಾನನಿಗೆ ಮತ್ತು ಕೊನೆಗೌಡನ ಕುಟುಂಬ ಸೇರಿದಂತೆ ಎಲ್ಲರಿಗೂ ಕಷ್ಟಕರವಾಗಿದ್ದು. ಆ ಹಿನ್ನಲೆಯಲ್ಲಿ ಅನಂತಮೂರ್ತಿ ಹೆಗಡೆ ಅವರ ಕಾರ್ಯ ಮೆಚ್ಚಬೇಕಾಗಿದ್ದು ಎಂದರು.

ವೇದಿಕೆಯಲ್ಲಿ ಹಿರಿಯ ಸಹಕಾರಿ ಎಸ್.ಎನ್.ಹೆಗಡೆ ದೊಡ್ನಳ್ಳಿ, ರಮೇಶ ನಾಯ್ಕ ಕುಪ್ಪಳ್ಳಿ, ಮಾಜಿ ಜಿಪಂ ಸದಸ್ಯೆ ಉಷಾ ಹೆಗಡೆ, ತಿಮ್ಮಪ್ಪ ಮಡಿವಾಳ ಸಿದ್ದಾಪುರ, ಪ್ರಸಾದ ಹೆಗಡೆ ಯಲ್ಲಾಪುರ ಸೇರಿದಂತೆ ಇನ್ನಿತರರು ಇದ್ದರು.

ಟಿಆರ್ಸಿ ಸೊಸೈಟಿಯ ಜಿ.ಜಿ ಹೆಗಡೆ ಕುರುವಣಿಗೆ ನಿರ್ವಹಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ 300 ಕ್ಕೂ ಅಧಿಕ ಕೊನೆಗೌಡರು ಈ ಉಚಿತ ವಿಮಾ ಸೌಲಭ್ಯದ ಪ್ರಯೋಜನ ಪಡೆದುಕೊಂಡರು.

ಜೀವವನ್ನು ಪಣಕ್ಕಿಟ್ಟು ಅತ್ಯಂತ ಕಷ್ಟಕರ ಕೆಲಸ ಮಾಡುವ ಕೊನೆಗೌಡರ ಜೀವ ಮತ್ತು ಜೀವನದ ಸುರಕ್ಷತೆ ಬಗ್ಗೆ ಅನಂತಮೂರ್ತಿ ಹೆಗಡೆ ಅವರ ಕೆಲಸ ನಿಜಕ್ಕೂ ಪುಣ್ಯಕಾರ್ಯ. ಅವರ ಜನಹಿತ ಕೆಲಸಕ್ಕೆ ಸಮಾಜ, ನಾವೆಲ್ಲರೂ ಜೊತೆನಿಲ್ಲಬೇಕು ಎಂದು ಟಿಆರ್ಸಿ ಅಧ್ಯಕ್ಷರಾದ ರಾಮಕೃಷ್ಣ ಹೆಗಡೆ, ಕಡವೆ ತಿಳಿಸಿದರು.

ನಮ್ಮಂತ ಅತ್ಯಂತ ದುರ್ಬಲ ವರ್ಗದ ಜನರ ಜೀವ ಮತ್ತು ಜೀವನದ ಬಗ್ಗೆ ಕಳಕಳಿ ಹೊಂದಿರುವ ಅನಂತಮೂರ್ತಿ ಹೆಗಡೆ ಅವರ ಜೀವನ ಸದಾ ನೆಮ್ಮದಿಯಿಂದಿರಲಿ. ಮತ್ತೊಬ್ಬರ ಸುರಕ್ಷತೆಗಾಗಿ ಕೆಲಸ ಮಾಡುವ ಇಂತಹ ವ್ಯಕ್ತಿಗಳು ಸಿಗುವುದು ತೀರಾ ಅಪರೂಪ. ಅವರಿಗೆ ಸಮಸ್ತ ಕೃಷಿಕ, ಕಾರ್ಮಿಕ ವರ್ಗ ಕೃತಜ್ಞತೆ ಸಲ್ಲಿಸುತ್ತದೆ ಎಂದು ಯೋಜನೆಯ ಫಲಾನುಭವಿ ಕೊನೆಗೌಡ
ಶಶಾಂಕ ಗೌಡ, ಗೋಳಗೋಡು ತಿಳಿಸಿದ್ದಾರೆ.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಫೆಬ್ರವರಿ 2 ರಿಂದ 5 ರವರೆಗೆ ಭಟ್ಕಳ ನಾಮಧಾರಿ ಸಮಾಜದ ಗುರುಮಠ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಮತ್ತು ಪಾಲಕಿ ಮಹೋತ್ಸವ ಕಾರ್ಯಕ್ರಮ

Next Post

ಫೆಬ್ರುವರಿ 3  ರಂದು  ಶ್ರೀಧರ ಪದ್ಮಾವತಿ ದೇವಿಯ  ಪಲ್ಲಕ್ಕಿ ಉತ್ಸವ

Kannada News Desk

Kannada News Desk

Next Post
ಫೆಬ್ರುವರಿ 3  ರಂದು  ಶ್ರೀಧರ ಪದ್ಮಾವತಿ ದೇವಿಯ  ಪಲ್ಲಕ್ಕಿ ಉತ್ಸವ

ಫೆಬ್ರುವರಿ 3  ರಂದು  ಶ್ರೀಧರ ಪದ್ಮಾವತಿ ದೇವಿಯ  ಪಲ್ಲಕ್ಕಿ ಉತ್ಸವ

Please login to join discussion

ಕ್ಯಾಲೆಂಡರ್

January 2025
MTWTFSS
 12345
6789101112
13141516171819
20212223242526
2728293031 
« Dec   Feb »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d