• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Wednesday, October 22, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಪ್ರಧಾನಿ ಮೋದಿಯವರ 8 ವರ್ಷದ ಆಡಳಿತ ಅವಧಿಯಲ್ಲಿ ದೇಶವೂ ಅತ್ಯುನ್ನತ ಹಂತಕ್ಕೆ ತಲುಪುವುದರೊಂದಿಗೆ ವಿಕಾಸಕ್ಕೆ ಬೇರೆಯದ್ದೇ ಭಾಷ್ಯ ಬರೆದಿದ್ದಾರೆ- ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್

ಸಂಪಾದಕರು-ಕುಮಾರ ನಾಯ್ಕ

Kannada News Desk by Kannada News Desk
April 26, 2023
in ರಾಜ್ಯ ಸುದ್ದಿ
0
ಪ್ರಧಾನಿ ಮೋದಿಯವರ 8 ವರ್ಷದ ಆಡಳಿತ ಅವಧಿಯಲ್ಲಿ ದೇಶವೂ ಅತ್ಯುನ್ನತ ಹಂತಕ್ಕೆ ತಲುಪುವುದರೊಂದಿಗೆ ವಿಕಾಸಕ್ಕೆ ಬೇರೆಯದ್ದೇ ಭಾಷ್ಯ ಬರೆದಿದ್ದಾರೆ- ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಶ್ಯಾಮರಾಜ್
0
SHARES
383
VIEWS
WhatsappTelegram Share on FacebookShare on TwitterLinkedin

ಪ್ರಧಾನಿ ಮೋದಿಯವರ 8 ವರ್ಷದ ಆಡಳಿತ ಅವಧಿಯಲ್ಲಿ ದೇಶವೂ ಅತ್ಯುನ್ನತ ಹಂತಕ್ಕೆ ತಲುಪುವುದರೊಂದಿಗೆ ವಿಕಾಸಕ್ಕೆ ಬೇರೆಯದ್ದೇ ಭಾಷ್ಯ ಬರೆದಿದ್ದಾರೆ- ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್

https://kannadatodaynews.net/wp-content/uploads/2023/04/VID-20230426-WA0394.mp4

ಭಟ್ಕಳ-ಬಿಜೆಪಿ ಎನ್ನುವುದು ಸಮಾಜದ ಅಂತಿಮ ವರ್ಗದ ಅಂತಿಮ ವ್ಯಕ್ತಿಯ ತನಕ ಸಿಗಬೇಕಾದ ವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ಮಾಡುತ್ತಿರುವ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದ್ದು, ಪ್ರಧಾನಿ ಮೋದಿಯವರ 8 ವರ್ಷದ ಆಡಳಿತ ಅವಧಿಯಲ್ಲಿ ದೇಶವೂ ಅತ್ಯುನ್ನತ ಹಂತಕ್ಕೆ ತಲುಪುವುದರೊಂದಿಗೆ ವಿಕಾಸಕ್ಕೆ ಬೇರೆಯದ್ದೇ ಭಾಷ್ಯ ಬರೆದಿದ್ದಾರೆ ಎಂದು ಕೇರಳ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ಯಾಮರಾಜ್ ಹೇಳಿದರು.
ಅವರು ಮಂಗಳವಾರದOದು ಎರಡು ದಿನಗಳ ಕಾಲ ಭಟ್ಕಳ ಮಂಡಲದ ವಿವಿಧ ಭಾಗಗಳಲ್ಲಿ ಚುನಾವಣೆ ಪ್ರಚಾರದ ನಿಮಿತ್ತ ಭಟ್ಕಳಕ್ಕೆ ಆಗಮಿಸಿ ಮಂಡಲದ ಕಾರ್ಯಾಲಯದಲ್ಲಿ ಮಾತನಾಡಿದರು.
ಕಳೆದ 8 ವರ್ಷದಿಂದ ಪ್ರಧಾನಿ ಮೋದಿ ಅವರು ಪ್ರಧಾನಮಂತ್ರಿಯ ಅವಧಿಯಲ್ಲಿ ದೇಶವನ್ನು ಜಗತ್ತಿನಲ್ಲಿಯೇ ಬೇರೆಯದ್ದೇ ಭಾಷ್ಯಕ್ಕೆ ಕೊಂಡೊಯ್ದಿದ್ದಾರೆ. ಕಾರಣ ದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಜನರ ಆರೋಗ್ಯ ರಕ್ಷಣೆ ಹಾಗೂ ಶಿಕ್ಷಣದ ಕ್ಷೇತ್ರದ ಜೊತೆಗೆ ಉಳಿದೆಲ್ಲ ಕ್ಷೇತ್ರದಲ್ಲಿ ದೇಶವು ಅತ್ಯುನ್ನತವಾಗಿ ಬೆಳೆದು ನಿಂತಿದೆ. ಈ ದೇಶದ ಯುವಕರಿಗೆ ನೀವು ಕೆಲಸ ಹುಡುಕುವ ಬದಲು ಕೆಲಸ ನೀಡುವ ಸ್ಥಾನದಲ್ಲಿ ನಿಂತು ಉದ್ಯಮ ಆರಂಭಿಸುವತ್ತ ಚಿತ್ತ ಹರಿಸಿ ಎಂದು ಕಿವಿಮಾತು ಹೇಳಿದಂತೆ ಕೇಂದ್ರ ಸರಕಾರ ಯುವಕರ ಉದ್ಯೋಗ ಸಬಲೀಕರಣಕ್ಕಾಗಿ ಮುದ್ರಾ ಯೋಜನೆ ಜಾರಿ ತಂದು ಸದ್ಯ ದೇಶದಲ್ಲಿ ಒಟ್ಟು 41 ಕೋಟಿ ಸಾಲವನ್ನು ನೀಡಲಾಗಿದೆ ಎಂದರು.
ಬಿಜೆಪಿ ಶಿವಮೊಗ್ಗ ವಿಭಾಗದ ಸಹ ಪ್ರಬಾರಿ ಎನ್.ಎಸ್.ಹೆಗಡೆ ಮಾತನಾಡಿ, ಈ ಬಾರಿ ಚುನಾವಣೆಯನ್ನು ಯಶಸ್ವಿಯಾಗಿ ಮಾಡಿ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನವನ್ನು ಗೆದ್ದು ಮತ್ತೆ ಸರಕಾರ ರಚಿಸಬೇಕೆಂಬ ಉದ್ದೇಶದೊಂದಿಗೆ ಚುನಾವಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಉತ್ತಮ ರಾಜಕೀಯ ವಾತಾವರಣ ಸ್ರಷ್ಟಿಗೆ ವಿಜಯ ಸಂಕಲ್ಪ ಯಾತ್ರೆಯನ್ನು ಸಹ ರಾಜ್ಯಾದ್ಯಂತ ನಡೆಸಲಾಗಿತ್ತು. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಬೇರೆ ಬೇರೆ ರಾಜ್ಯದ ಶಾಸಕರು, ಮಂತ್ರಿಗಳು, ಕೇಂದ್ರದ ಮಂತ್ರಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ. ಇಂದಿನಿಂದ ಪ್ರತಿ ಮನೆ ಮನೆ ಪ್ರಚಾರ ಕಾರ್ಯವು ಚಾಲನೆಗೊಳ್ಳಲಿದೆ. ಏಪ್ರಿಲ್ 27ರಿಂದ ರಾಜ್ಯದಲ್ಲಿ ಪ್ರಧಾನಿ ಮೋದಿ ಅವರು ಪ್ರಚಾರ ಕಾರ್ಯ ನಡೆಸಲಿದ್ದು, ಮೇ 3ರಂದು ನಿಗದಿತ ನೌಕಾನೆಲೆಯ ಜಾಗದಲ್ಲಿ ಜಿಲ್ಲೆಯ ಮಧ್ಯ ಭಾಗ ಅಂಕೋಲಾದಲ್ಲಿ ಪ್ರಚಾರದ ಸಮಾವೇಶ ನಡೆಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಭಟ್ಕಳ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, 5 ವರ್ಷದ ಅವಧಿಯಲ್ಲಿ ಶಾಸಕರಾಗಿ ಸುನೀಲ ನಾಯ್ಕ ಅವರು ಜನಪರ ಕಾರ್ಯಕ್ರಮದ ಜೊತೆಗೆ ಸರಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸ ಮತ್ತು ವೈಯಕ್ತಿಕ ಧನ ಸಹಾಯವನ್ನು ಮಾಡಿದ್ದಾರೆ. ಒಟ್ಟು 1200 ಕೋಟಿ ಅನುದಾನವನ್ನು ಸರಕಾರ ಮಟ್ಟದಿಂದ ತಂದು ಸಮರ್ಪಕವಾದ ಯೋಜನೆಗೆ ಅನುಷ್ಠಾನಗೊಳಿಸಿದ್ದಾರೆ. ಬಹುಮುಖ್ಯವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಶಾಂತಿಯುತವಾಗಿ ಸಂಭ್ರಮದಿ0ದ ರಾಜಾಂಗಣ ನಾಗಬನದ ಪುನರ್ ಪ್ರತಿಷ್ಠಾಪನೆ ಮಾಡಿರುವುದು, ಕೇವಲ ಮೂರು ದಿನದಲ್ಲಿ ಪುರಸಭೆಯಿಂದ ಹಾಕಲಾದ ಅನಧಿಕೃತ ಉರ್ದು ಭಾಷೆಯ ಬೋರ್ಡ್ ತೆರವು ಮಾಡಿಸಿದ್ದಾರೆ. ಇನ್ನು ಕ್ಷೇತ್ರದ ಬಹುತೇಕ ದೇವಸ್ಥಾನಗಳಿಗೆ ವೈಯಕ್ತಿಕ ಹಣದಲ್ಲಿ ಮಹಾದ್ವಾರ ಹಾಗು 40 ಆಟೋ ರಿಕ್ಷಾ ನಿಲ್ದಾಣಗಳನ್ನು ನಿರ್ಮಿಸಿಕೊಟ್ಟಿದ್ದಾರೆ. 5 ವರ್ಷದಲ್ಲಿ ಕಾರ್ಮಿಕ ಇಲಾಖೆಯಿಂದ ಒಂದು ಲಕ್ಷದ ಐವತ್ತು ಸಾವಿರ ಕಾರ್ಮಿಕರಿಗೆ ಕಿಟ್ ವಿತರಿಸಲಾಗಿದೆ. ಉಜ್ವಲ ಗ್ಯಾಸ್ ಯೋಜನೆಯಲ್ಲಿ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ 13545 ಫಲಾನುಭವಿಗಳಿಗೆ ಲಭಿಸಿದೆ. ಇನ್ನು ಕ್ಷೇತ್ರದಲ್ಲಿ 30 ಸಾವಿರಕ್ಕೂ ಅಧಿಕ ಕಿಸಾನ್ ಸಮ್ಮಾನ ಯೋಜನೆ ಫಲಾನುಭವಿಗಳಿದ್ದಾರೆ ಎಂದರು.

ಭಟ್ಕಳ ಆಟೋ ರಿಕ್ಷಾ ಚಾಲಕರ ಸಂಘಕ್ಕೆ ಜಾಗ ಮಂಜೂರು ವಿಚಾರದಲ್ಲಿ ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದವರು ಆರೋಪಿಸುತ್ತಿದ್ದು, ಯಾವುದೇ ಪೂರಕ ದಾಖಲೆ ಪಡೆಯದೇ ಕ್ಯಾಬಿನೆಟ್ ನಲ್ಲಿ ಜಾಗ ಮಂಜೂರಾತಿ ವಿಚಾರ ಮುಂದುವರೆಯುದಿಲ್ಲ. ಸರಕಾರದಿಂದ ಮಂಜೂರಾದ ಪ್ರತಿ ನಮ್ಮ ಬಳಿಯಿದೆ ಎಂದ ಅವರು ಸರಕಾರಕ್ಕೆ ಆಟೋ ರಿಕ್ಷಾ ಚಾಲಕರ ಸಂಘವು ತುಂಬಬೇಕಾದ ಅಗತ್ಯ ಹಣ ತುಂಬಿದ ಬಳಿಕ ಜಾಗದ ಮುಂದಿನ ಕ್ರಮ ನಡೆಯಲಿದೆ. ಕಾಂಗ್ರೆಸ್ ಪಕ್ಷದಿಂದ ನೀಡುತ್ತಿರುವ ಗ್ಯಾರೆಂಟಿ ಕಾರ್ಡ ಸಂಪೂರ್ಣವಾಗಿ ಬೊಗಸ ಕಾರ್ಡ ಆಗಿದೆ. ಈ ಹಿನ್ನೆಲೆ ಕೆಲವು ಕಡೆ ಮಹಿಳೆಯರಿಂದ ಆಧಾರ ಕಾರ್ಡ ಪಡೆದು ಸಹಿ ಪಡೆದುಕೊಳ್ಳುವ ಕೆಲಸದಿಂದ ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸನಿOದ ಆಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಭಟ್ಕಳ ಚುನಾವಣಾ ಉಸ್ತುವಾರಿ ಕಿಶೋರ ಕುಮಾರ ಕುಂದಾಪುರ, ಉತ್ತರ ಕನ್ನಡ ಜಿಲ್ಲಾ ಸಹ ಪ್ರಭಾರಿ ಪ್ರಸ್ನದ ಕೆರೆಕೈ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಭಟ್ಕಳ ಮಂಡಲ ಪ್ರಭಾರಿ ಪ್ರಶಾಂತ ನಾಯ್ಕ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮುಂತಾದವರು ಇದ್ದರು.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Tags: BJP Bhatkal-HonnsvarBJP karnatkaBJP Uttarkannda
Previous Post

ಪರಿಸ್ಥಿತಿಗೆ ಹೆದರಿ ಹತಾಶರಾಗುವುದು ಮುಸ್ಲಿಮರ ಜಾಯಮಾನವಲ್ಲ; ದ್ವೇಷ ಮತ್ತು ಹಗೆತನವನ್ನು ಪ್ರೀತಿಯಿಂದ ಎದುರಿಸುವಂತೆ ಮೌಲಾನ್ ಅಬ್ದುಲ್ ಅಲೀಮ್ ಖತೀಬಿ ಕರೆ

Next Post

ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ ಭಟ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯವರ ಪ್ರಕಟನೆ

Kannada News Desk

Kannada News Desk

Next Post
ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ ಭಟ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯವರ ಪ್ರಕಟನೆ

ಮೊಹಮ್ಮದ ಜಬ್ರುದ್ದ ಖತೀಬ ಮೋಹಿದ್ದಿನ ಸಾಬ ಭಟ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯವರ ಪ್ರಕಟನೆ

Please login to join discussion

ಕ್ಯಾಲೆಂಡರ್

April 2023
MTWTFSS
 12
3456789
10111213141516
17181920212223
24252627282930
« Mar   May »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d