ಭಟ್ಕಳ- ನಿನ್ನೆ ಭಟ್ಕಳದ ತೆಂಗಿನಗುಂಡಿಯ ಸಮುದ್ರದಲ್ಲಿ ಮೀನುಗಾರಿಕೆ ತೆರಳಿ ದೋಣಿ ಮಗುಚಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಪೈಕಿ ಓರ್ವನ ಮೃತದೇಹ ಇಂದು ಪತ್ತೆಯಾಗಿದೆ.ನಾಲ್ವರ ಪೈಕಿ ನಾಪತ್ತೆಯಾಗಿದ್ದ ರಾಮಕೃಷ್ಣ ಮೊಗೇರ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.
ತೆಂಗಿನ ಗುಂಡಿಯ ಹೊನ್ನೆಗದ್ದೆ ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿದೆ.
ಮೀನುಗಾರಿಕೆಗೆ ತೆರಳಿದ್ದ 6 ಮಂದಿ ಮೀನುಗಾರರಲ್ಲಿ ನಾಲ್ವರು ಕಾಣೆಯಾಗಿದ್ದರು.ನಿನ್ನೆ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಪಲ್ಟಿಯಾಗಿ ಈ ದುರಂತ ಸಂಭವಿಸಿತ್ತು.ಆರು ಜನರ ಪೈಕಿ ಇಬ್ಬರ ರಕ್ಷಣೆ ಮಾಡಲಾಗಿತ್ತು, ನಾಲ್ವರು ಕಾಣೆಯಾಗಿದ್ದರು .ನಾಲ್ವರ ಪೈಕಿ ಓರ್ವ ವ್ಯಕ್ತಿಯ ಮೃತದೇಹ ಹೊನ್ನೆಗದ್ದೆ ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು, ಮೃತದೇಹವನ್ನು ಆಂಬುಲೆನ್ಸ್ ಮೂಲಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನುಳಿದ ಮೂವರು ಮೀನುಗಾರರ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ. ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಇಂದು ತೆಂಗಿನಗುಂಡಿ ಸಮುದ್ರದ ತೀರಕ್ಕೆ ಭೇಟಿ ಕೊಟ್ಟು ಶೋದ ಕಾರ್ಯವನ್ನು ಪರಿಶೀಲಿಸಿ, ಆದಷ್ಟು ಇನ್ನುಳಿದ ಮೂವರನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ತಿಳಿಸಿದರು. ಸಲಹೆ , ಸೂಚನೆ ನೀಡಿದರು.ಮೃತರ ಕುಟುಂಬದ ವರಿಗೆ ಸಾಂತ್ವನ ಹೇಳಿದರು.