ಭಟ್ಕಳ- ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಭಟ್ಕಳದ ನೂರ್ ಮಸೀದಿಯ ಎದುರುಗಡೆ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಮೃತರ ಪತ್ನಿ ಭಾರತಿ ಸಲ್ಪದರಲ್ಲೇ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೃತರು ಮುರುಡೇಶ್ವರ ಬಸ್ತಿಯ ದೇವಿಕಾನ ನಿವಾಸಿಯಾಗಿದ್ದು ಈಶ್ವರ್ ಮಂಜಪ್ಪ ನಾಯ್ಕ್ ಮೂಲತಃ ಭಟ್ಕಳದ ಕರಿಕಲ್ ಗ್ರಾಮದವರೆಂದು ಹೇಳಲಾಗಿದೆ.
ಇಬ್ಬರು ತಮ್ಮ ಮನೆಯಿಂದ ಬೈಕ್ ಮೂಲಕ ಭಟ್ಕಳದ ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದ್ದು ಟ್ಯಾಂಕರ್ ಹಾಗೂ ಬೈಕ್ ಶಿರಾಲಿ ಕಡೆಯಿಂದ ಭಟ್ಕಳ ಬೈಪಾಸ್ ಕಡೆ ತೆರಳುತ್ತಿತ್ತು ಈ ವೇಳೆ ನೂರ್ ಮಸೀದಿ ಹತ್ತಿರ ಬೈಕ್ ಗೆ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ ಸವಾರನ ಮೇಲೆ ಮುಂಭಾಗದ ಚಕ್ರ ಹರಿದಿದೆ ಹೆಲ್ಮೆಟ್ ಧರಿಸಿದ್ದರು ಕೂಡ ಟ್ಯಾಂಕರ್ ಚಕ್ರಕ್ಕೆ ಸಿಕ್ಕಿ ತಲೆ ಚಿದ್ರವಾಗಿದೆ. ಈ ವೇಳೆ ಹಿಂಬದಿ ಕುಳಿತಿದ್ದ ಮೃತರ ಪತ್ನಿ ಸಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮೃತ ದೇಹದ ಮುಂದೆ ಪತ್ನಿಯ ಆಕ್ರಂದನ ಹೃದಯ ಕುಲುಕುವಂತಿತ್ತು.ಭಟ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರ ತನಿಖೆ ಕೈಗೊಂಡಿದ್ದಾರೆ.