
ಶಿರಸಿ: ಅಸ್ಥಿತ್ವವಿಲ್ಲದ ಕಾನೂನು ಬಾಹಿರ ಅರಣ್ಯ ಹಕ್ಕು ಸಮಿತಿಯಿಂದ , ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನಾ ಪ್ರಕ್ರೀಯೆ ಜರುಗಿಸುತ್ತಿರುವುದು ಹಾಗೂ ಮಂಜೂರಿಗೆ ಸಂಬAಧಪಟ್ಟAತೆ ಮೂರು ತಲೆಮಾರಿನ ನಿರ್ದಿಷ್ಟ ಸಾಕ್ಷö್ಯಗಳನ್ನು ಆಪೇಕ್ಷೀಸಿ ಸಮಿತಿಯು ನೋಟಿಸ್ ನೀಡಿರುವುದಕ್ಕೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತೀರ್ವ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಅವರು ಇಂದು ಡಿ: ೨೭ ರಂದು ಶಿರಸಿಯ ಹೋರಾಟಗಾರರ ವೇದಿಕೆಯ ಕರ್ಯಾಲಯದಲ್ಲಿ ದಿನಾಂಕ ೨೮-೧೧-೨೦೨೪ ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮೇಲ್ವಿಚಾರಣಾ ಸಮಿತಿಯ ಸಭೆಯ ನಡವಳಿಕೆಗೆೆ ಸಲ್ಲಿಸಿದ ಆಕ್ಷೇಪ ಮತ್ತು ತಕರಾರಿನ ಪ್ರತಿಯನ್ನು ಬಿಡುಗಡೆಗೋಳಿಸುತ್ತಾ ಮೇಲಿನಂತೆ ಹೇಳಿದರು.
ಪಾರಂಪರಿಕ ಅರಣ್ಯವಾಸಿಗಳಿಗೆ ಅರ್ಜಿ ಮಂಜೂರಿಗೆ ಸಂಬAಧಿಸಿ ನಿರ್ದಿಷ್ಠವಾದ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ಅಂಶ ಅರಣ್ಯ ಹಕ್ಕು ಕಾಯಿದೆ ತಿದ್ದು ಪಡಿಯಾಗಿದೆ. ಅಲ್ಲದೇ, ಮೂರು ತಲೆಮಾರಿನ ವೈಯಕ್ತಿಕ ನಿರ್ದಿಷ್ಟ ದಾಖಲೆ ಅವಶ್ಯವೆಂದು ತಪ್ಪಾಗಿ ಅಥೈಸಲಾಗುತ್ತಿದೆ. ಅರಣ್ಯವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರವು ಮೂರು ತಲೆಮಾರಿನ ಜನವಸತಿ ಪ್ರದೇಶವೆಂದು ಪುರಾವೆ ಮಾಡಬೇಕೆಂಬ ಕೇಂದ್ರ ಸರಕಾರದ ಬುಡಕಟ್ಟು ಮಂತ್ರಾಲಯ ನ್ಯೂಡೆಲ್ಲಿ ನೀಡಿದ ಸ್ಪಷ್ಟೀಕರಣ ಹಾಗೂ ಗುಜರತ್ ಉಚ್ಚ ನ್ಯಾಯಾಲಯ ನೀಡಿದ ಆದೇಶ ರಾಜ್ಯ ಮೇಲ್ವಿರಣಾ ಸಮಿತಿ ನಿರ್ಲಕ್ಷೀಸಿದೆ ಎಂದು ಆಕ್ಷೇಪಣೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಗಣೇಶ ಮಂಜುನಾಥ ನಾಯ್ಕ ಚಂದಾವರ, ನಾರಾಯಣ ಈಶ್ವರ ದೇಶಭಂಡಾರಿ ಹೊನ್ನಾವರ, ಗೋವಿಂದ ಬಾನು ಮೂರೂರು, ದಿನಕರ ಈಶ್ವರ ಹೊದಕೆ ಶಿರೂರು ಇವರು ಉಪಸ್ಥಿತರಿದ್ದರು.
ಸದಸ್ಯರಿಲ್ಲದೇ ಸಮಿತಿ ಪ್ರಕ್ರಿಯೆ:
ಜಿಲ್ಲಾ ಮತ್ತು ಉಪ ವಿಭಾಗ ಅರಣ್ಯ ಹಕ್ಕು ಸಮಿತಿಯಲ್ಲಿ ನಾಮ ನೀರ್ದೆಶಿತ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯಿAದ ಆಯ್ಕೆಯಾದ ಮೂರು ಸದಸ್ಯರನ್ನ ಓಳಗೋಂಡ ಒಟ್ಟು ಆರು ಸದಸ್ಯರು ಇರಬೇಕೆಂಬ ಅಂಶ ಅರಣ್ಯ ಹಕ್ಕು ಕಾಯಿದೆಯಲ್ಲಿ ಉಲ್ಲೇಖ ಇರುತ್ತದೆ. ಆದರೆ, ಅದನ್ನು ಪರಿಗಣನೆ ತೆಗೆದುಕೋಳ್ಳದೇ, ನಾಮ ನಿರ್ದೆಶಿತ ಸದಸ್ಯರ ಅನುಪಸ್ಥಿತಿಯಲ್ಲಿ ಕೇವಲ ಅಧಿಕಾರ ವರ್ಗದವರ ಸದಸ್ಯರ ಉಪಸ್ಥಿಯಲ್ಲಿ ಅರಣ್ಯ ಹಕ್ಕು ಸಮಿತಿ ಪುನರ್ ಪರಿಶೀಲನಾ ಪ್ರಕ್ರಿಯೆ ಜರುಗುಸುತ್ತಿರುವುದು ಖೇದಕರವೆಂದು ರಾಜ್ಯ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

