• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Thursday, July 3, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ವಿಧಾನಸಭಾಧ್ಯಕ್ಷರಾಗಿದ್ದ ಈಗಿನ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅವಕಾಶವಿದ್ದರೂ ಜಿಲ್ಲೆಗೆ ಏನು ಕೆಲಸ ಮಾಡಲಿಲ್ಲ ಈಗ ಚುನಾವಣೆಗಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ- ಸಚಿವ ಮಾಂಕಳ ವೈದ್ಯ

Kannada News Desk by Kannada News Desk
April 13, 2024
in ಉತ್ತರ ಕನ್ನಡ
0
ವಿಧಾನಸಭಾಧ್ಯಕ್ಷರಾಗಿದ್ದ ಈಗಿನ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅವಕಾಶವಿದ್ದರೂ ಜಿಲ್ಲೆಗೆ ಏನು ಕೆಲಸ ಮಾಡಲಿಲ್ಲ ಈಗ ಚುನಾವಣೆಗಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ- ಸಚಿವ ಮಾಂಕಳ ವೈದ್ಯ
0
SHARES
278
VIEWS
WhatsappTelegram Share on FacebookShare on TwitterLinkedin

ವಿಧಾನಸಭಾಧ್ಯಕ್ಷರಾಗಿದ್ದ ಈಗಿನ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅವಕಾಶವಿದ್ದರೂ ಜಿಲ್ಲೆಗೆ ಏನು ಕೆಲಸ ಮಾಡಲಿಲ್ಲ ಈಗ ಚುನಾವಣೆಗಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ- ಸಚಿವ ಮಾಂಕಳ ವೈದ್ಯ


ಕುಮಟಾ: ನಾವು ನುಡಿದಂತೆ ನಡೆದಿದ್ದೇವೆ. ಆದರೆ ಬಿಜೆಪಿಯವರಿಗೆ ಸುಳ್ಳು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆಯೂ ಅವರು ಸುಳ್ಳೇ ಹೇಳಿದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಕಿಡಿಕಾರಿದರು.ಜಿಲ್ಲೆಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೆ ಪ್ರತಿದಿನ ಸಾವು- ನೋವುಗಳಾಗುತ್ತಿವೆ. ಬಿಜೆಪಿ ಸಚಿವರ ಕಂಪನಿ ಐಆರ್‌ಬಿಯ ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ. ಎಷ್ಟೇ ಸಾವು ನೋವಾದರೂ ಅವರಿಗೆ ಮನುಷ್ಯತ್ವ ಇಲ್ಲ ಎಂದು ಮಂಕಾಳ ವೈದ್ಯ ತಿಳಿಸಿದರು.


ಹೊಲನಗದ್ದೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷರಾಗಿದ್ದ ಈಗಿನ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅವಕಾಶವಿದ್ದರೂ ಮಾಡಿದ ಕೆಲಸಗಳೇನೂ ಇಲ್ಲ. ಈಗ ಚುನಾವಣೆಗಾಗಿ ಸುಳ್ಳು ಹೇಳುತ್ತಾ ಬಂದಿದ್ದಾರೆ. ನಮ್ಮ ಅವಧಿಯಲ್ಲಿ ಬಂದ ಸೇತುವೆ ಕಾಮಗಾರಿಗಳನ್ನೂ ಉದ್ಘಾಟಿಸಲಾಗಿಲ್ಲ. ೪೦% ಕಮಿಷನ್ ಲೂಟಿ ಬಿಟ್ಟರೆ ಬೇರೇನೂ ಮಾಡಿಲ್ಲ. ಅಭಿವೃದ್ಧಿಗಾಗಿ ಬಿಜೆಪಿಗರ ಸುಳ್ಳನ್ನು ನಂಬದೆ ಕಾಂಗ್ರೆಸ್ ಗೆ ಮತ ನೀಡಿ ಎಂದು ಮನವಿ ಮಾಡಿದರು.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಮೊದಲ ಬಾರಿಗೆ ಶಾಸಕಿಯಾದಾಗ ಖಾನಾಪುರದಲ್ಲಿ ಒಂದು ಆಸ್ಪತ್ರೆ ನಿರ್ಮಿಸಬೇಕೆಂಬ ಕನಸಿತ್ತು. ಅದನ್ನ ಮಾಡಿ ತೋರಿಸಿದ್ದೇನೆ. ಆ ಗುರಿ, ಧೈರ್ಯ ಬಂದಿದ್ದು ನಿಮ್ಮಿಂದ. ಈ ಭಾಗದ ಜನರ ಆಸೆಯಂತೆ ನಾನು ಸಂಸದಳಾದರೆ ಮೊದಲ ಆದ್ಯತೆ ಆಸ್ಪತ್ರೆಗೇ ನೀಡುತ್ತೇನೆ. ನಿಮ್ಮ ಮನೆಮಗಳಂತೆ ಆಶೀರ್ವದಿಸಿದರೆ ಶಾಸಕಿಯಾಗಿ ಖಾನಾಪುರದಲ್ಲಿ ಮಾಡಿದಂತೆ ಕೆಲಸಗಳನ್ನ ಈ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲೂ ಮಾಡಿ ತೋರಿಸುತ್ತೇನೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ, ಗ್ಯಾರಂಟಿ ಕಾರ್ಡ್ ಬಗ್ಗೆ ಅಪಪ್ರಚಾರ ಮಾಡಿದ ಬಿಜೆಪಿಗರು, ಅದರ ಸೌಲಭ್ಯ ಪಡೆಯಲು ತಾ ಮುಂದೆ ತಾ ಮುಂದೆ ಎಂದರು. ಇದು ದೇಶದ ಭವಿಷ್ಯದ ಚುನಾವಣೆ. ಸಂವಿಧಾನ, ಹಕ್ಕಿನ ಬಗ್ಗೆ ಮಾತನಾಡಿದರೂ ಸುಮ್ಮನೆ ಕೂರಲು ಆಗಲ್ಲ. ೩೦ ವರ್ಷಗಳಿಂದ ಸಂಸದರು ಹೇಗಿದ್ದರು ಎಂಬುದನ್ನ ನಾವು ಮರೆಯಬಾರದು. ಬಿಜೆಪಿಯ ಹೊಸ ಅಭ್ಯರ್ಥಿಯೂ ಏನು ಕೆಲಸ ಮಾಡಿದ್ದಾರೆಂಬುದೂ ತಿಳಿದಿದೆ. ಒಂದಾಗಿ ಜಿಲ್ಲೆಯಿಂದ ನಮ್ಮ ಎಂಪಿಯನ್ನು ದೆಹಲಿಗೆ ಕಳಿಸೋಣ ಎಂದು ಕರೆನೀಡಿದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರತ್ನಾಕರ್ ನಾಯ್ಕ ಮಾತನಾಡಿ, ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುತ್ತೇವೆಂದ ಬಿಜೆಪಿಗರಿಗೆ ಅಡಿಗಲ್ಲು ಹಾಕಲೂ ಆಗಿಲ್ಲ. ಆದರೆ ಈ ಬಾರಿ ಸಚಿವ ಮಂಕಾಳ ವೈದ್ಯರ‌ ನೇತೃತ್ವದಲ್ಲಿ ಈ ಬಾರಿ ಕುಮಟಾದಲ್ಲಿ ಆಸ್ಪತ್ರೆ ಆಗೇ ಆಗುತ್ತದೆಂಬ ವಿಶ್ವಾಸವಿದೆ. ಆಸ್ಪತ್ರೆಯಾದರೆ ಕೇವಲ ಆರೋಗ್ಯವಷ್ಟೇ ಅಲ್ಲ, ಜಿಲ್ಲೆಯ ಎಲ್ಲಾ ಕ್ಷೇತ್ರಗಳೂ ಅಭಿವೃದ್ಧಿ ಆಗಲಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಎಚ್.ನಾಯ್ಕ, ಡಾ.ಅಂಜಲಿಯವರು ಸ್ವತಃ ವೈದ್ಯರಾಗಿರುವ ಕಾರಣ ಜಿಲ್ಲೆಗೆ ಅಗತ್ಯ ಇರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಾಣ ಮಾಡೇ ಮಾಡುತ್ತಾರೆಂಬ ನಂಬಿಕೆ ಇದೆ. ೩೦ ವರ್ಷ ಸಂಸದರಾಗಿದ್ದ ಅನಂತಕುಮಾರ್ ಹೆಗಡೆಯವರು ಒಂದೇ ಒಂದು ಜನೋಪಯೋಗಿ ಕೆಲಸಗಳನ್ನ ಮಾಡಿಲ್ಲ. ಕೇಂದ್ರದಲ್ಲಿ ನಮ್ಮನ್ನ ಪ್ರತಿನಿಧಿಸುವ ಅಭ್ಯರ್ಥಿ ಇದ್ದರೆ ನಮ್ಮೆಲ್ಲ ಸಮಸ್ಯೆಗಳನ್ನ ಪರಿಹರಿಸಿಕೊಡಲು ಸಾಧ್ಯ, ಇದಕ್ಕೆ ಡಾ.ಅಂಜಲಿ ನಿಂಬಾಳ್ಕರ್ ಸಮರ್ಥರು. ಚುನಾವಣೆ ಬಂದಾಗ ಜಿಲ್ಲೆಯಲ್ಲಿ ಯಾಕೆ ಕೋಮುಗಲಭೆ ಆಗುತ್ತಿತ್ತು, ಜಾತಿ- ಜಾತಿಗಳ ನಡುವೆ ವೈಷಮ್ಯ ಬೆಳೆಯುತ್ತಿತ್ತು ಎಂಬುದನ್ನ ಜನತೆ ಅರ್ಥ ಮಾಡಿಕೊಳ್ಳಬೇಕು. ಇಂಡಿಯಾ ಸರ್ಕಾರ ಮುಂದಿನ ದಿನಗಳಲ್ಲಿ ಭದ್ರವಾಗಿ ಕೇಂದ್ರದಲ್ಲಿ ಬರಲಿದ್ದು, ಡಾ.ಅಂಜಲಿಯವರನ್ನ ಜಿಲ್ಲೆಯ ಧ್ವನಿಯಾಗಿ ಆರಿಸಿ ಕಳಿಸೋಣ ಎಂದರು.

ಹೊಲನಗದ್ದೆ ಗ್ರಾ.ಪಂ. ಮಾಜಿ ಅಧ್ಯಕ್ಷರೂ ಆದ ಹಾಲಿ ಸದಸ್ಯ ರಾಘವೇಂದ್ರ ಪಟಗಾರ ಮಾತನಾಡಿ, ವೈದ್ಯರಿಗೆ ರೋಗಿಯ ಕಷ್ಟ ಅರ್ಥವಾಗುತ್ತದೆ. ವೈದ್ಯರಾದ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಜಿಲ್ಲೆಯ ಜನರ ಕಷ್ಟ ಗೊತ್ತಿದೆ. ಹೀಗಾಗಿ ಅವರನ್ನ ಗೆಲ್ಲಿಸಿ, ಅಗತ್ಯವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನ ನಿರ್ಮಿಸಲು ಅವರ ಕೈ ಬಲಪಡಿಸೋಣ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಉತ್ತರಕನ್ನಡದ ಧ್ವನಿಯನ್ನ ಲೋಕಸಭೆಗೆ ಮುಟ್ಟಿಸಲು ಡಾ.ಅಂಜಲಿ ನಿಂಬಾಳ್ಕರ್ ಸಮರ್ಥರು. ಕಾಂಗ್ರೆಸ್ ಎಲ್ಲರ ಪಕ್ಷ; ದೇಶಕ್ಕಾಗಿ ಬಲಿದಾನ ನೀಡಿ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಪಂಚ ಗ್ಯಾರಂಟಿ ಮೂಲಕ ಜನಮನ್ನಣೆ ಗಳಿಸಿದ್ದೇವೆ. ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲದ ಮೇಲಿದೆ ಎಂದರು.

ಈ ವೇಳೆ ಡಾ.ಅಂಜಲಿ ನಿಂಬಾಳ್ಕರ್ ಅವರಿಗೆ ಹೊಲನಗದ್ದೆ ಗ್ರಾಮಸ್ಥರು ಉಡಿ ತುಂಬಿ ಗೌರವಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷ ಹೊನ್ನಪ್ಪ ನಾಯ್ಕ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾರತಿ ಪಟಗಾರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರದೀಪ್ ನಾಯಕ, ವಿ.ಎಲ್.ನಾಯ್ಕ ಮುಂತಾದವರಿದ್ದರು.

Related

Previous Post

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಾಮಪತ್ರ ಸಲ್ಲಿಕೆ

Next Post

ಭಟ್ಕಳದ ಪ್ರಸಿದ್ಧ ಶ್ರೀ ಸೋಡಿಗದ್ದೆ ಮಹಾಸತಿ ದೇವಿಯ ದರ್ಶನ ಪಡೆದ ಕಾಂಗ್ರೆಸ್ ಪಕ್ಷದ ಉ.ಕ ಲೋಕಸಭಾ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್

Kannada News Desk

Kannada News Desk

Next Post
ಭಟ್ಕಳದ ಪ್ರಸಿದ್ಧ ಶ್ರೀ ಸೋಡಿಗದ್ದೆ ಮಹಾಸತಿ ದೇವಿಯ ದರ್ಶನ ಪಡೆದ ಕಾಂಗ್ರೆಸ್ ಪಕ್ಷದ ಉ.ಕ ಲೋಕಸಭಾ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್

ಭಟ್ಕಳದ ಪ್ರಸಿದ್ಧ ಶ್ರೀ ಸೋಡಿಗದ್ದೆ ಮಹಾಸತಿ ದೇವಿಯ ದರ್ಶನ ಪಡೆದ ಕಾಂಗ್ರೆಸ್ ಪಕ್ಷದ ಉ.ಕ ಲೋಕಸಭಾ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್

Please login to join discussion

ಕ್ಯಾಲೆಂಡರ್

July 2025
M T W T F S S
 123456
78910111213
14151617181920
21222324252627
28293031  
« Jun    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.