ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಟ್ಕಳ ತಾಲೂಕಿನ ಬೆಂಗ್ರೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುರಿದ ಬಾರಿ ಗಾಳಿಮಳೆಯ ಪರಿಣಾಮ ಗೀತಾ ಗೋವಿಂದ ದೇವಾಡಿಗ ರವರ ಮನೆ ತೀರಾ ಹಾನಿಯಾಗಿತ್ತು. ಫಲಾನುಭವಿಗೆ ತಾತ್ಕಾಲಿಕ ಮನೆ ದುರಸ್ಥಿಗೆ ನೇರವಾಗಲು ಪೂಜ್ಯ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರೂ.20,000/- ಸಹಾಯಧನ ಮಂಜೂರು ಮಾಡಿದರು. ಮಂಜೂರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ಗಣೇಶ .ಡಿ. ನಾಯ್ಕ, ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ವಿಷ್ಣು ದೇವಾಡಿಗ, ಬೆಂಗ್ರೆ ಒಕ್ಕೂಟದ ಅಧ್ಯಕ್ಷರಾದ ಶ್ವೇತಕುಮಾರಿ ವಿ. ದೇವಾಡಿಗ , ವಲಯ ಮೇಲ್ವಿಚಾರಕಿ ಮುಕ್ತಾ ನಾಯ್ಕ್ ಸೇವಾಪ್ರತಿನಿಧಿ ನಯನಾ ರವರ ಉಪಸ್ಥಿತಿಯಲ್ಲಿ ಮಂಜೂರಾತಿ ಪತ್ರ ವಿತರಣೆ ಮಾಡಿದರು.. ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ವಿಷ್ಣು ದೇವಾಡಿಗ ರವರು ಮಾತನಾಡಿ ಧರ್ಮಸ್ಥಳ ಯೋಜನೆಯ ಮೂಲಕ ಪರಮ ಪೂಜ್ಯ ಹೆಗ್ಗಡೆಯವರು ಜನರ ಕಷ್ಟಕ್ಕೆ ತುರ್ತು ಸ್ಪಂದನೆ ನೀಡಿ ನೇರವಿನ ಸಹಾಯಹಸ್ತ ನೀಡುತ್ತಿರುವುದು ಶ್ಲಾಘನೀಯ ಎಂದರು.