ಭಟ್ಕಳ: ಜ್ಞಾನೇಶ್ವರಿ ಮಹಿಳಾ ಮಂಡಳಿ, ದೈವಜ್ಞ ಯುವಕ ಮಂಡಳಿ, ದೈವಜ್ಞ ವೆಂಕಟೇಶ ಸಂಸ್ಥೆ ಇವರ ಸoಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯು ಇಲ್ಲಿನ ಸೋನಾರಕೇರಿಲ್ಲಿರುವ ದೈವಜ್ಞ ಸಭಾಭವನ ದಲ್ಲಿ ಜರುಗಿತು. ಕಾರ್ಯಕ್ರಮವನ್ನು ಪ್ರವೀಣ್ ಶಾಂತ ಕೊಲ್ಲೆ ಉದ್ಘಾಟಿಸಿ ಮಹಿಳೆಯರು ಕ್ರಿಯಾಶೀಲರಾಗಿ ಸಮಾಜಕ್ಕೆ ಶಕ್ತಿಯಾಗಿ ಬೆಳೆಯಬೇಕು ಎಂದು ನುಡಿದರಲ್ಲದೆ ಮಹಿಳೆಯರು ಸಾಧನೆ, ಸ್ವಾಭಿಮಾನದಿಂದ ಬದುಕಬೇಕೆಂದರು. ಅತಿಥಿಯಾಗಿ ಉಪಸ್ಥಿತರಿದ್ದ ಮಂಗಳೂರಿನ ಪುಷ್ಪ ಕೃಷ್ಣನಂದ ಶೇಟ್ ಮಾತನಾಡಿ ಸೊಸೆಯನ್ನು ಕೂಡ ಮಗಳಿನಂತೆ ಪ್ರೀತಿಸಬೇಕು. ಸಂಸ್ಕೃತಿ ಯನ್ನು ಉಳಿಸಿ ಬೆಳೆಸುವ ಜೊತೆಗೆ ಕುಟುಂಬವನ್ನು, ಸಮಾಜವನ್ನು ಕಟ್ಟುವ ಕಾರ್ಯ ಮಹಿಳೆಯ ಪಾತ್ರ ಮುಖ್ಯವಾದುದು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾಕ್ಟರ ಸವಿತಾ ಕಾಮತ್,ಸುವರ್ಣಕಾರ ಸಂಘದ ಅಧ್ಯಕ್ಷ ಸತ್ಯನಾರಾಯಣ ರತ್ನಾಕರ್ ಶೇಟ್, ದೈವಜ್ಞ ಯುವಕ ಮಂಡಳಿಯ ಅಧ್ಯಕ್ಷ ಅಣ್ಣಪ್ಪ ಕೊಗ್ಗಾ ಶೇಟ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸವಿತಾ ರತ್ನಾಕರ್ ಶೇಟ್ ಇವರಿಗೆ ದೈವಜ್ಞ ರತ್ನ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿಲ್ಲದೆ ಬೇಬಿ ಸೂರ್ಯಕಾಂತ್ ಶೇಟ್, ಸುವರ್ಣ ಮಂಜುನಾಥ್ ಶೇಟ್, ಸರಸ್ವತಿ ಅಣ್ಣಪ್ಪ ಶೇಟ್, ವಾಣಿ ಗಣೇಶ್ ಭಟ್ ಮುಂತಾದವರನ್ನು ಸನ್ಮಾನಿಸಲಾಯಿತು .
ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಲಾಗಿತ್ತು ಪ್ರಕಾಶ ಕೃಷ್ಣ ರಾಯ್ಕರ್ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಸವಿತಾ ರತ್ನಾಕರ್ ಶೇಟ್ ಹಾಗೂ ಸುಪ್ರಿಯ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.
ಪರಿಮಳ ರಾಜಶೇಖರ್ ಶೇಟ್ ಸ್ವಾಗತಿಸಿದರು ದೀಪ ಸಂದೀಪ್ ಕೊಲ್ಲೆ ಇವರು ವಂದಿಸಿದರು
ಕಾರ್ಯಕ್ರಮದಲ್ಲಿ ಸುಧೀರ್ ಶೇಟ್, ಸಂದೀಪ್ ಶೇಟ್, ಸುನಿಲ್ ಶೇಟ್ ಹಾಗೂ ಜ್ಞಾನೇಶ್ವರಿ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು