ಅಂಕೋಲಾ: ದಿನಪತ್ರಿಕೆಗಳನ್ನು ಓದುವುದನ್ನು ರೂಡಿಸಿಕೊಳ್ಳುವುದರಿಂದ ಪ್ರತಿದಿನದ ಜಾಗತಿಕ ಆಗು ಹೋಗುಗಳ ಜ್ಞಾನವನ್ನು ಅರಿಯಲು ಸಾಧ್ಯವಿದ್ದು
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳತ್ತ ಒಲವನ್ನು ಕಡಿಮೆ ಮಾಡಿ ದಿನಪತ್ರಿಕೆಗಳನ್ನು ಓದುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅಂಕೋಲಾ ತಹಸೀಲ್ದಾರ ಡಾ.ಚಿಕ್ಕಪ್ನ ನಾಯಕ ಹೇಳಿದರು.ಪಟ್ಟಣದ ಪಿ.ಎಂ.ಜ್ಯೂನಿಯರ್ ಕಾಲೇಜಿನ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಅಂಕೋಲಾ ತಾಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಪತ್ರಿಕಾ ಮಾಧ್ಯಮಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದ್ದು ಇದರಿಂದಾಗಿ ಇಂದಿನ ವಿದ್ಯಾರ್ಥಿ,ಯುವಜನರಲ್ಲಿ ಸಾಮಾಜಿಕ ಪರಿಜ್ಞಾನದ ಕೊರತೆ ಕಂಡು ಬರುತ್ತಿದೆ ಶೈಕ್ಷಣಿಕವಾಗಿ ಸಾಧನೆ ಮಾಡಿ ರ್ಯಾಂಕ್ ಪಡೆದರೂ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನ ಅತ್ಯಗತ್ಯವಾಗಿದ್ದುಪತ್ರಿಕೆಗಳನ್ನು ಓದುವುದರಿಂದ ಜ್ಞಾನ ಭಂಡಾರವನ್ನು ಸಂಪಾದಿಸಬಹುದಾಗಿದೆ ಎಂದರು.
ಇಂದು ವಿದ್ಯಾರ್ಥಿಗಳು ಅನಗತ್ಯ ಒತ್ತಡ, ನಕಾರಾತ್ಮಕ ಚಿಂತನೆ, ಇನ್ನೊಬ್ಬರೊಂದಿಗೆ ಹೋಲಿಕೆ ಮೊದಲಾದ ವಿಷಯಗಳಿಂದ ವಿಚಲಿತರಾಗುತ್ತಿರುವುದು ಹೆಚ್ಚುತ್ತಿದ್ದು ಆತ್ಮಹತ್ಯೆಯಂತ ಕೃತ್ಯಗಳಿಗೆ ದಾರಿಯಾಗುತ್ತಿದೆ
ದುಡುಕಿನ ನಿರ್ಧಾರಗಳನ್ನು ಬಿಟ್ಟುಉತ್ತಮ ವಿಷಯಗಳತ್ತ ಗಮನ ನೀಡುವ ಜೊತೆಗೆ ಕಲಿಕೆಗೆ ಮಹತ್ವಕೊಡಬೇಕಾದ ಅಗತ್ಯತೆ ಇದೆ ಎಂದು ಅವರು ಕರೆ ನೀಡಿದರು.
ವಿದ್ಯಾರ್ಥಿ ಯುವ ಜನರ ಮಾನಸಿಕ ಸದೃಢತೆಗೆ ವಿಶೇಷ ಉಪನ್ಯಾಸ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ ನಾಯ್ಕ ಮಾತನಾಡಿ ಯುವ ಜನರಲ್ಲಿ ಆತ್ಮಹತ್ಯೆ ಎನ್ನುವುದು ಇಂದು ಜಾಗತಿಕ ಸಮಸ್ಯೆಯಾಗಿ ದಿನೇದಿನ ಹೆಚ್ಚುತ್ತಿರುವುದು ಆತಂಕದ ಸಂಗತಿ ಎಂದರು.
ಇಂದು ಕುಟುಂಬದೊಂದಿಗೆ ಕಾಲ ಕಳೆಯುವುದು,ಪರಸ್ಪರ ಚರ್ಚಿಸುವುದು ಕಡಿಮೆಯಾಗುತ್ತಿದೆ ಸಣ್ಣ ಸಮಸ್ಯೆ ಇದ್ದರೂ ಯಾರೊಂದಿಗೂ ಹೇಳಿಕೊಳ್ಳದೇಮನಸ್ಸಿನಲ್ಲಿ ಕೊರಗುವುದುಆತ್ಮಹತ್ಯೆಯಂತ ಕೃತ್ಯಗಳಿಗೆ ದಾರಿಯಾಗುತ್ತಿದೆ ಎಂದ ಅವರುಯಾವುದೇ ಸಮಸ್ಯೆ ಇದ್ದರೆ ತಂದೆ ತಾಯಿಗಳೊಂದಿಗೆ ಹೇಳಿಕೊಳ್ಳಿ ಅಗತ್ಯ ಬಿದ್ದರೆ ಆಪ್ತ ಸಮಾಲೋಚನೆಗೆ ಆರೋಗ್ಯ ಇಲಾಖೆಯಲ್ಲಿ ವ್ಯವಸ್ಥೆ ಇದೆಆತ್ಮಹತ್ಯೆಯಂತ ಮಾರ್ಗ ಬೇಡ
ಎಲ್ಲಾ ಸಮಸ್ಯೆಗಳಿಗೂ ಸಾವಿದೆ ಆತ್ಮಹತ್ಯೆ ಮಾರ್ಗವಲ್ಲ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿ.ಎಂ.ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯ ಫಾಲ್ಗುಣ ಗೌಡ ಮಾತನಾಡಿ ವಿದ್ಯಾರ್ಥಿ, ಯುವಜನರು ಮೊಬೈಲ್ ಎಂಬ ಕತ್ತಲ ಕೋಣೆಯಿಂದ ಹೊರಬಂದು ಸುಂದರ ವೈವಿಧ್ಯಮಯ ಪ್ರಪಂಚದತ್ತ ತಮ್ಮ ಗಮನ ನೀಡಬೇಕು ಇದು ಬದುಕುವ ಛಲವನ್ನು ಹೆಚ್ಚಿಸುತ್ತದೆ, ಸಾಧನೆಗೆ ಸ್ಪೂರ್ತಿಯಾಗುತ್ತದೆ ಎಂದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ದೈವಜ್ಞ, ಕರಾವಳಿ ಉಸ್ತುವಾರಿ ಕುಮಾರ ನಾಯ್ಕ, ಭಟ್ಕಳ ತಾಲೂಕು ಘಟಕದ ಅಧ್ಯಕ್ಷ ಶಂಕರ ನಾಯ್ಕ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರ ಸ್ವಾಗತ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಮಾರುತಿ ಹರಿಕಂತ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಸದಸ್ಯರುಗಳಾದ ವಿದ್ಯಾಧರ ಮೊರಬಾ, ವಿಲಾಸ ನಾಯಕ, ನಾಗರಾಜ ಶೆಟ್ಟಿ ಪರಿಚಯಿಸಿದರು, ಸುಪ್ರಿಯಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು, ಕಾರ್ಯದರ್ಶಿಕಿರಣ ಗಾಂವಕರ್ ವಂದಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯ ಸಮಿತಿ ಸದಸ್ಯ ಸೂರಜ್ ನಾಯ್ಕ ಉಪಸ್ಥಿತರಿದ್ದರು.