ಐ ಆರ್ ಬಿ ಕಂಪನಿಯ ಹೊಳೆಗದ್ದೆ ಟೋಲ್ ನಲ್ಲಿ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕುಮಟಾ-ಹೊನ್ನಾವರ ಜೆಡಿಎಸ್ ಘಟಕದಿಂದ ಮುಖ್ಯಮಂತ್ರಿಗೆ ಮನವಿ
ಕುಮಟಾ- ಐ ಆರ್ ಬಿ ಕಂಪನಿಯ ಹೊಳೆಗದ್ದೆ ಟೋಲ್ ಅಲ್ಲಿ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕುಮಟಾ-ಹೊನ್ನಾವರ ಜೆಡಿಎಸ್ ಘಟಕದಿಂದ ಕುಮಟಾ ತಹಶೀಲ್ದಾರ್ ಮೂಲಕ ಇಂದು ಮುಖ್ಯಮಂತ್ರಿಗೆ ಮನವಿ ನಿಡಿದರು
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಸೂರಜ್ ನಾಯ್ಕ ಸೋನಿ ಮಾತನಾಡಿಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರ ದಲ್ಲಿ ವಿಪರೀತ ಮಳೆಯಿಂದಾಗಿ ಸಾಕಷ್ಟು ಕುಟುಂಬಗಳು ಮನೆಯನ್ನು ಕಳೆದುಕೊಂಡು ಸರಿಯಾದ ಪರಿಹಾರ ಸಿಗದೆ ಬಹಳ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಎನ್.ಹೆಚ್.ಎ.ಐ ಮತ್ತು ಐ ಆರ್ ಬಿ ಕಂಪನಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಅನೇಕ ಗುಡ್ಡ ಕುಸಿತ ಹಾಗೂ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಇಲ್ಲಿಯವರೆಗೂ ಕಂಪನಿ ವತಿಯಿಂದ ಯಾರಿಗೂ ಕೂಡ ಪರಿಹಾರ ದೊರಕಿಲ್ಲ.ಮತ್ತು ಅಲ್ಲಿನ ಟೋಲ್ ಸಂಗ್ರಹ ನಡೆಯುತ್ತಲೇ ಇದೆ ಇದನ್ನು ವಿರೋದಿಸಿ ಇಂದು ಕುಮಟಾದ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಮನೆ ಸಂಪೂರ್ಣ ನಾಶವಾದವರಿಗೆ ಕನಿಷ್ಠ 5 ರಿಂದ 7 ಲಕ್ಷ ಹಾಗೂ ಭಾಗಶಃ ಮನೆಯನ್ನು ಕಳೆದುಕೊಂಡಿರುವವರಿಗೆ ಕನಿಷ್ಠ 2 ರಿಂದ 3 ಲಕ್ಷ ಪರಿಹಾರದ ಧನವನ್ನು ನೀಡುವಂತೆ ಮತ್ತು ಆದಷ್ಟು ಬೇಗನೆ ಐ ಆರ್ ಬಿ ಕಂಪನಿಯ ಹೊಳೆಗದ್ದೆ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕೆಂದು ಎಂದು ಸರಕಾರಕ್ಕೆ ಆಗ್ರಹಿಸಿದರು. ಈ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಕುಮಟಾ ಹೊನ್ನಾವರ ಜೆಡಿಎಸ್ ಘಟಕದ ವತಿಯಿಂದ ಮನವಿಯನ್ನು ಕುಮಟಾದ ತಹಶೀಲ್ದಾರರಿಗೆ ನೀದುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಮಟಾ ಜೆಡಿಎಸ್ ತಾಲೂಕಾ ಅಧ್ಯಕ್ಷರಾದ ಸಿ ಜಿ ಹೆಗಡೆ, ಹೊನ್ನಾವರ ತಾಲೂಕ ಅಧ್ಯಕ್ಷರಾದ ಟಿ ಟಿ ನಾಯ್ಕ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ದತ್ತಾ ಪಟಗಾರ,ಶ್ರೀಪಾದ್ ನಾಯ್ಕ್ ಹೊನ್ನಾವರ, ಶಂಕರ್ ಹರಿಕಂತ್ರ,ಯಶವಂತ ಗೌಡ, ಶಿವರಾಮ ಮಡಿವಾಳ,ನಾಗೇಶ್ ನಾಯ್ಕ,ವಿಘ್ನೇಶ ಗುನಗಾ ,ಗಣಪತಿ ನಾಯ್ಕ , ಭವಾನಿ ಹಳ್ಳೇರ್, ಗೋವಿಂದ್ರಾಯ ಶಾನಭಾಗ್,ಚಂದ್ರಶೇಖರ್ ಪಾಲೇಕ,ಅನಂತ ಗೌಡ, ಗಿರೀಶ್ ಭಂಡಾರಿ ತುಳಸು ಗೌಡ, ಅಣ್ಣಪ್ಪ ನಾಯ್ಕ, ಹಾಗೂ ಜೆಡಿಎಸ್ ಪಕ್ಷದ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.