ಯಲ್ಲಾಪುರ- ಕುಮಟಾ ಸಂತೆಗೆ ತರಕಾರಿ ಒಯ್ಯುತ್ತಿದ್ದ ಲಾರಿ ಯಲ್ಲಾಪುರದ ಅರಬೈಲ್ ಪ್ರದೇಶದಲ್ಲಿ ಪಲ್ಟಿಯಾಗಿದೆ.ಈ ಅಪಘಾತದಲ್ಲಿ ಒಟ್ಟು 10 ಜನ ಸಾವನಪ್ಪಿದ್ದಾರೆ. 15ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಬುಧವಾರ ಬೆಳಗ್ಗೆ ಹುಬ್ಬಳ್ಳಿ – ಅಂಕೋಲಾ ಹೆದ್ದಾರಿ ಮೂಲಕ ಈ ಲಾರಿ ಚಲಿಸುತ್ತಿತ್ತು. ಸವಣೂರಿನಿಂದ ಹೊರಟ ಲಾರಿಯಲ್ಲಿ 40ರಷ್ಟು ಜನರಿದ್ದರು. ಅವರೆಲ್ಲರೂ ತರಕಾರಿ ಮಾರಾಟಕ್ಕಾಗಿ ಕುಮಟಾ ಸಂತೆಗೆ ಹೋಗುತ್ತಿದ್ದರು.
ಹಣ್ಣು-ತರಕಾರಿ ಮೂಟೆಗಳ ಜೊತೆ ಕುಳಿತು ರೈತರು ಹಾಗೂ ವ್ಯಾಪಾರಿಗಳು ಲಾರಿಯಲ್ಲಿ ಸಂಚರಿಸುತ್ತಿದ್ದರು. ಕಾಗೇರಿ ಪೆಟ್ರೋಲ್ ಬಂಕ್ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಧರೆಗೆ ಗುದ್ದಿತು.ಪರಿಣಾಮ ಲಾರಿ ಪಲ್ಟಿಯಾಗಿದ್ದು 10 ಜನ ಅಲ್ಲಿಯೇ ಸಾವನಪ್ಪಿದರು. ಅವರ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಾಲ್ವರು ಮಾತ್ರ ಸುರಕ್ಷಿತವಾಗಿರುವ ಮಾಹಿತಿ ಲಭಿಸಿದೆ. ಪೊಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಯಲ್ಲಾಪುರ ಅರಬೈಲ್ ಘಟ್ಟದ ಗುಳ್ಳಾಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. ಇಂದು ಬೆಳಗಿನ ಜಾವ ಮಂಜು ಮುಸುಕಿದ ಹೆದ್ದಾರಿ ೬೩ ರಲ್ಲಿ ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ , ಲಾರಿಯಲ್ಲಿದ್ದ 25 ಜನ ತರಕಾರಿ ವ್ಯಾಪಾರಿಗಳ ಪೈಕಿ 10ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಗಾಯಗೊಂಡ 15 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಹಾವೇರಿ ಜಿಲ್ಲೆಯ ಸವಣೂರು ನಿಂದ ಕುಮಟಾ ಸಂತೆಗೆ ತರಕಾರಿ ವ್ಯಾಪರಿಗಳು ಬರುತ್ತಿದ್ದರು ಎನ್ನಲಾಗಿದೆ .ಈ ಅಪಘಾತದಲ್ಲಿ ಹತ್ತು ಜನರ ಸಾವು ಕಂಡಂತಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ .ಮೃತರು ಸವಣೂರು ಮೂಲದವರು ಎಂದು ತಿಳಿದು ಬಂದಿದೆ.