ಕಾರವಾರ- ಕಾರವಾರ ಬಸ್ ಡಿಪೋ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನೆಪವೊಡ್ಡಿ ಅಂಕೋಲಾ ವರ್ಗಾಯಿಸಲು ಮುಂದಾದ ಸಾರಿಗೆ ಅಧಿಕಾರಿಗಳ ಅಸಮರ್ಪಕ ಪ್ರಸ್ತಾವನೆ ವಿರುದ್ಧ ಹಾಗೂ ಕಾರವಾರ ಬಸ್ ಡಿಪೋ ಆವರಣದಲ್ಲಿ ಪರ್ಯಾಯ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಬೇಕು ಯಾವುದೇ ಕಾರಣಕ್ಕೂ ಅಂಕೋಲಾ ವರ್ಗಾಯಿಸಬಾರದೆಂದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಅವರು ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಇ.ಮೇಲ್ ವ್ಯಾಟ್ಸಪ್ ಮನವಿ ಸಲ್ಲಿಸಿದರು . ಕೆ.ಆರ್.ಟಿ. ಸಿ. ಬಸ್ ಡಿಪೋದಲ್ಲಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನೆಪವೊಡ್ಡಿ ಕಾರವಾರ ಬಸ್ ಡಿಪೋ ತಾತ್ಕಾಲಿಕವಾಗಿ ಅಂಕೋಲಾ ವರ್ಗಾಯಿಸಲು ಸಾರಿಗೆ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ವಿಷಯ ತಿಳಿದು ಬಂದಿದೆ. ಇದ್ದರಿಂದ ಆಗುವ ಸಾಧಕ ಬಾಧಕಗಳ ಪರಿಣಾಮಗಳು ಹಾಗೂ ಬಸ್ ಪ್ರಯಾಣಿಕರಿಗೆ ಆಗುವ ಜಟಿಲವಾದ ಸಮಸ್ಯೆಗಳ ಕುರಿತು ಅಧ್ಯಯನ ಮಾಡದೇ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾಡಲು ಮುಂದಾಗಿದ್ದಾರೆ.
ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ಘಟಕ ತೀವ್ರವಾಗಿ ಖಂಡಿಸುತ್ತದೆ. ಹಿರಿಯ ಸಾರಿಗೆ ಅಧಿಕಾರಿಗಳು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕಾರವಾರ ಬಸ್ ಡಿಪೋ ವ್ಯವಸ್ಥಾಪಕರು ಸೇರಿ ಮಾನವ ಹಕ್ಕುಗಳನ್ನು ಕಗೋಲೆ ಮಾಡಲು ಮುಂದಾಗಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ . ಸಾರಿಗೆ ಸಂಸ್ಥೆಯಿಂದ ಸುಸಜ್ಜಿತವಾದ ವ್ಯವಸ್ಥೆ ನೀಡುವ ಬದಲು ಅವ್ಯವಸ್ಥೆ ಆಗರ ಮಾಡುವುದಲ್ಲವೇ ಈ ಭಾಗದ ನಾಗರಿಕರಿಗೆ ನರಕಯಾತನೆ ಮಾಡಲು ಮುಂದಾಗಿದ್ದಾರೆ. ಅಷ್ಟೆಯಲ್ಲದೇ ಕಾರವಾರ ನಗರದಿಂದ ಪ್ರತಿದಿನ ದೂರದ ರಾಜ್ಯ ಜಿಲ್ಲೆ ತಾಲ್ಲೂಕು ಹಾಗೂ ಗ್ರಾಮೀಣ ಭಾಗಕ್ಕೆ ತೆರಳುವ ಪ್ರಯಾಣಿಕರು ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳ ತೀವ್ರ ಸ್ವರೂಪದ ಸಂಕಷ್ಟ ಎದುರಿಸಬೇಕಾಗುತ್ತದೆ. ಅಂಕೋಲಾದಿಂದ ಕಾರವಾರ ತುಂಬಾ ದೂರವಿದ್ದು ಅಲ್ಲಿಂದ ಬಸ್ ಗಳು ತಂದು ಓಡಿಸಲು ಸಾಧ್ಯವಿಲ್ಲ . ದೂರದ ಅಂಕೋಲಾದಿಂದ ಬಸ್ ಕಾರವಾರ ಬಂದು ವಿವಿಧ ಊರುಗಳಿಗೆ ಸಂಚರಿಸುವ ಬಸ್ ವ್ಯವಸ್ಥೆ ಸಂಪೂರ್ಣ ಗೊಂದಲಮಯುಂಟಾಗಿ ಬಸ್ ಪ್ರಯಾಣಿಕರಿಗೆ ತೀವ್ರ ಸ್ವರೂಪ ಸಂಕಷ್ಟ ಎದುರಿಸಲಿದ್ದಾರೆ .
ಬಸ್ ಡಿಪೋ ಕಾರವಾರ ನಗರದಲ್ಲಿ ಇರುವಾಗಲೇ ಸರಿಯಾದ ಬಸ್ ವ್ಯವಸ್ಥೆ ನೀಡುವಲ್ಲಿ ಸಾರಿಗೆ ಸಂಸ್ಥೆ ವಿಫಲವಾಗಿದೆ.ಇತ್ತೀಚಿನ ದಿನಗಳಲ್ಲಿ ಕಾರವಾರ ಬಸ್ ಡಿಪೋ ಅವ್ಯವಸ್ಥೆ ಆಗರ ಎಂದು ಗುರುತಿಸಿ ಕೊಂಡಿದೆ. ಆದ್ದರಿಂದ ಸಾರಿಗೆ ಸಚಿವರು ಇತ್ತ ಗಮನ ಹರಿಸಿ ಯಾವುದೇ ಕಾರಣಕ್ಕೂ ಅಂಕೋಲಾ ಬಸ್ ಡಿಪೋ ತಾತ್ಕಾಲಿಕವಾಗಿ ವರ್ಗಾಯಿಸಬಾರದು. ಮತ್ತು ಸಾರಿಗೆ ಸಚಿವರಿಗೆ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮಾನ್ಯ ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಆದ್ದರಿಂದ ಕಾರವಾರ ಬಸ್ ಡಿಪೋ ತಾತ್ಕಾಲಿಕವಾಗಿ ಅಂಕೋಲಾ ವರ್ಗಾಯಿಸಲು ಮುಂದಾದ ಸಾರಿಗೆ ಸಂಸ್ಥೆಯ ಅಸಮರ್ಪಕ ಪ್ರಸ್ತಾವನೆ ಕೈ ಬೀಡಬೇಕು.ಕಾರವಾರ ಬಸ್ ಡಿಪೋ ಆವಾರಣದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಅವರು ಉತ್ತರಕನ್ನಡ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ..