ಭಟ್ಕಳ-ಮುರುಡೇಶ್ವರದ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್ನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಆಟೋ ಚಾಲಕರ ಮೇಲೆ ಪಿಎಸ್ಐ ಹಣುಮಂತ ಬೀರಾದರ್ ಕಾನೂನು ಕ್ರಮ ಜರುಗಿಸಿದ್ದಾರೆ. ಆಟೋ ಚಾಲಕರ ಜೊತೆಯಾಗಿದ್ದ ಕೂಲಿ ಕಾರ್ಮಿಕ ಹಾಗೂ ಸೆಂಟ್ರಿಕ್ ಕೆಲಸದವನ ಮೇಲೆಯೂ ಪೊಲೀಸ್ ಪ್ರಕರಣ ದಾಖಲಾಗಿದೆ.
ಭಟ್ಕಳದ ಮುರುಡೇಶ್ವರ ಬಳಿಯಿರುವ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್ನಲ್ಲಿ ಮುಠ್ಠಳ್ಳಿ ಬಳಿಯ ಬದ್ರಿಮನೆ ಆಟೋ ಚಾಲಕ ಈಶ್ವರ ನಾಯ್ಕ ರೂಂ ಪಡೆದಿದ್ದರು. ರೂಂ ನಂ 105ಕ್ಕೆ ಅವರು ತಮ್ಮ ಸ್ನೇಹಿತರನ್ನು ಆಮಂತ್ರಿಸಿದ್ದರು. ಅದರ ಪ್ರಕಾರ ಮುಂಡಳ್ಳಿಮನೆಯ ಆಟೋ ಚಾಲಕ ವರದರಾಜ ನಾಯ್ಕ ಹಾಗೂ ತಲಾಂದ ಮನಕುಳಿಯ ಕಿಚ್ಚಪ್ಪನಮನೆ ಆಟೋ ಚಾಲಕ ಈಶ್ವರ ನಾಗಪ್ಪ ನಾಯ್ಕ ಅಲ್ಲಿಗೆ ಬಂದಿದ್ದರು. ಮಕ್ಕಿಮನೆಯ ಕೆಲಸದಾಳು ಈಶ್ವರ ಮಾಸ್ತಪ್ಪ ನಾಯ್ಕ ಹಾಗೂ ತಲಾಂದ ತಲಗೋಡು ಮನೆಯ ಸೆಂಟ್ರಿAಗ್ ಕೆಲಸದ ಲೋಕೇಶ ನಾಯ್ಕ ಸಹ ಅಲ್ಲಿ ಜೊತೆಯಾದರು.
ಈ ಎಲ್ಲರೂ ಸೇರಿ ಆ ರೂಮಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದರು. ಇದಕ್ಕಾಗಿ 13200 ರೂ ಹಣ ಹೂಡಿಕೆ ಮಾಡಿದ್ದರು. ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್ ಮಾಲಕ ಸಹ ಕಾನೂನುಬಾಹಿರ ಆಟಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಈ ವಿಷಯ ಅರಿತ ಮುರುಡೇಶ್ವರ ಪಿಎಸ್ಐ ಹಣಮಂತ ಬೀರಾದರ್ ಜೂನ್ 20ರಂದು ಅಲ್ಲಿ ದಾಳಿ ಮಾಡಿದರು. ಆಗ, ಅಂದರ್ ಬಾಹರ್ ಆಡುತ್ತಿದ್ದ ಎಲ್ಲರೂ ಒಂದೇ ಕಡೆ ಸಿಕ್ಕಿ ಬಿದ್ದರು. 13200ರೂ ಹಣ, ಇಸ್ಪಿಟ್ ಎಲೆ ಜೊತೆ ಎರಡು ಬೈಕನ್ನು ಪೊಲೀಸರು ವಶಕ್ಕೆಪಡೆದು, ಪ್ರಕರಣ ದಾಖಲಿಸಿದರು.