ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ವತಿಯಿಂದ ಪತ್ರಿಕಾ ದಿನಾಚರಣೆ
ಮುಂಡಗೋಡ: ಕರ್ನಾಟಕ ಪ್ರೆಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಘಟಕ ವತಿಯಿಂದ ಜುಲೈ 1 ಸೋಮವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಮುಂಡಗೋಡ್ ತಾಲೂಕು ಪತ್ರಕರ್ತರು ಮತ್ತು ಕರ್ನಾಟಕ ಪ್ರೆಸ್ಸ್ ಕ್ಲಬ್ ಸದಸ್ಯರು ಸೇರಿ ಸೋಮವಾರ ಪಟ್ಟಣದ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಗಿಡ ನೆಡುವ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ಸ್ ಕ್ಲಬ್ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ನಾಗರಾಜ ದೈವಜ್ಞ, ಪತ್ರಕರ್ತ ಚಂದ್ರಶೇಖರಯ್ಯ ಹಿರೇಮಠ,ಸದಸ್ಯ ರಾದ ಜಗದೀಶ ದೈವಜ್ಞ, ಅಣ್ಕುಣುಕುಮಾರ್ ಕಟಾವಕರ, ಸಂತೋಷ್ ದೈವಜ್ಞ, ಪರಶುರಾಮ್ ತಹಸೀಲ್ದಾರ, ಶ್ರೀನಿವಾಸ ದೈವಜ್ಞ, ವೈ ಪಿ ಬುಜಂಗಿ ,ಮುಂಡಗೋಡ್ ಅರಣ್ಯ ಅಧಿಕಾರಿಗಳು ಉಪಸ್ಥಿತರಿದ್ದರು