ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಶಿವಾನಿ ಶಾಂತರಾಮ ನೇತೃತ್ವದಲ್ಲಿ ಪಶ್ಚಿಮಬಂಗಾಳದ ವೈದ್ಯಕೀಯ ವಿದ್ಯಾರ್ಥಿನಿಯ ಹತ್ಯೆ ಖಂಡಿಸಿ ಭಟ್ಕಳದ ಲ್ಲಿ ಪ್ರತಿಭಟನೆ
ಭಟ್ಕಳ-ಶನಿವಾರ ಸಂಜೆ ಭಟ್ಕಳದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ ಮತ್ತು ಭಟ್ಕಳ ಬಿಜೆಪಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸುನೀತಾ ದಿನೇಶರವರ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಪಶ್ಚಿಮಬಂಗಾಳದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ದಾರುಣ ಹಿಂಸೆ ಮತ್ತು ಹತ್ಯೆ ಖಂಡಿಸಿ ಮೋಂಬತ್ತಿ ಮೌನ ಮೆರವಣಿಗೆಯನ್ನು ನಡೆಸಿದರು.ಮೌನ ಮೆರವಣಿಗೆಯು ಭಟ್ಕಳದ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯದಿಂದ ಆರಂಭ ಗೊಂಡು ಮೂಡಭಟ್ಕಳ ಬೈಪಾಸ್ ನಲ್ಲಿ ಮೋಂಬತ್ತಿ ಯನ್ನ ಬೆಳಗಿಸಿ 10ನಿಮಿಷದ ಅವಧಿ ಮೌನಾಚಾರಣೆ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಅಧ್ಯಕ್ಷರಾದ ಶಿವಾನಿ ಶಾಂತಾರಾಮ್ ಅವರು ಮಾತನಾಡಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಾದ ದಾರುಣ ಹತ್ಯೆಯನ್ನು ಖಂಡಿಸಿ..ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕೆಂದು ಆಗ್ರಹಿಸಿದರು . ಜಿಲ್ಲಾ ಕಾರ್ಯದರ್ಶಿ ಸುಬ್ರಾಯದೇವಾಡಿಗ ಅವರು ಮಾತನಾಡಿ ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ನೀಡುವ ಗೌರವ ಹಾಗೂ ಈ ಘಟನೆಯನ್ನು ಖಂಡಿಸಿ ತಪ್ಪುಮಾಡಿದವರಿಗೇ ಶಿಕ್ಷೆ ಆಗುವಂತೆ ಆಗ್ರಹಿಸಿದರು.
ಬಿಜೆಪಿ ಭಟ್ಕಳ ಮಂಡಲ ಅಧ್ಯಕ್ಷ ಲಕ್ಷ್ಮಿನಾರಾಯಣನಾಯ್ಕರವರು ಮಾತಾಡಿ ಈ ಘೋರ ಕರ್ತ್ಯವನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ್ ನಾಯ್ಕ ,ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಸುನೀತಾದಿನೇಶ ,ಪ್ರಧಾನ ಕಾರ್ಯದಶಿ ಕುಪ್ಪು ಗೊಂಡ ,
ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಯಮುನಾನಾಯ್ಕ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸವಿತಾಗೊಂಡ, ಜಿಲ್ಲಾ ಮೀನುಗಾರರ ಪ್ರಕೋಸ್ಟ ಸಹ ಸಂಚಾಲಕರಾದ ಭಾಸ್ಕರದೈಮನೆ, ಗ್ರಾಮಪಂಚಾಯ್ತಿ ಪ್ರಕೋಸ್ಟ್ ಸಂಚಾಲಕರಾದ ಮೋಹನನಾಯ್ಕ, ಮಂಡಲದ ಕಾರ್ಯದರ್ಶಿ ಜಗದೀಶ್ ನಾಯ್ಕ್ ,ಮಂಡಲದ ಖಚಂಚಿ ಪರಿಮಳ ಶೇಟ್ ಮತ್ತು ಮಂಡಲದ ಪದಾಧಿಕಾರಿಗಳು ಪಾಲ್ಗೊಂಡಿದ್ದರು ಹಾಗೂ ಹಲವಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.