• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Friday, May 9, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಸಿರಿಗನ್ನಡ ಗೆಳೆಯರ ಬಳಗದಿಂದ ಅದ್ದೂರಿ ದಸರಾ ಆಚರಣೆ:ಕನ್ನಡ ಕೈಂಕರ್ಯಕೆ ಸಿರಿಗನ್ನಡ ಗೆಳೆಯರ ಬಳಗ ಮುರುಡೇಶ್ವರ ಸಂಕಲ್ಪ

Kannada News Desk by Kannada News Desk
October 16, 2024
in ಉತ್ತರ ಕನ್ನಡ
0
ಸಿರಿಗನ್ನಡ ಗೆಳೆಯರ ಬಳಗದಿಂದ ಅದ್ದೂರಿ ದಸರಾ ಆಚರಣೆ:ಕನ್ನಡ ಕೈಂಕರ್ಯಕೆ ಸಿರಿಗನ್ನಡ ಗೆಳೆಯರ ಬಳಗ ಮುರುಡೇಶ್ವರ ಸಂಕಲ್ಪ
0
SHARES
435
VIEWS
WhatsappTelegram Share on FacebookShare on TwitterLinkedin

ಭಟ್ಕಳ- ಸದ್ದಿಲ್ಲದೇ ಜಿಲ್ಲೆಯಲ್ಲಿಯೇ ಕನ್ನಡ ಸೇವೆ ಮಾಡುತ್ತಾ ಬಂದಿರುವ ಸಿರಿಗನ್ನಡ ಗೆಳೆಯರ ಬಳಗ ಜೊತೆ ಜೊತೆಯಲ್ಲಿಯೇ ಪ್ರತಿವರ್ಷ ದಸರಾ ಹಬ್ಬವನ್ನೂ ಬಳಗದಿಂದ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದೆ.
ಭರತನಾಟ್ಯ, ಸುಗಮಸಂಗೀತ, ಸಾಹಿತ್ಯ ಗೋಷ್ಠಿ, ಕಮ್ಮಟಗಳು, ರಕ್ತದಾನ ಶಿಬಿರ ಹೀಗೆ ಹತ್ತು ಹಲವಾರು ಜನಪರ ಕಾರ್ಯಗಳನ್ನು ಬಳಗ ನಡೆಸಿಕೊಂಡು ಬರುತ್ತಿದೆ. ಸದಾ ಕ್ರಿಯಾಶೀಲ ಹೊಸತನವನ್ನು ಹುಡುಕುತ್ತಲೇ ವಿನೂತನ ಆಯಾಮದ ಮೂಲಕ ಚಟುವಟಿಕೆ ನಡೆಸುವ ಬಳಗದ ಅಧ್ಯಕ್ಷರು ಹಾಗೂ ಬೈಲೂರು ಗ್ರಾಮ ಪಂಚಾಯತಿಯ ಸದಸ್ಯರಾದ ವಾಸು ನಾಯ್ಕ ಬಲ್ಸೆಯವರು ತನ್ನ ಅನೇಕ ಯುವ ಬಳಗನ್ನು ಕಟ್ಟಿಕೊಂಡು ಕನ್ನಡಕ್ಕಾಗಿ ಸೇವೆ ಮಾಡುವ ದೃಷ್ಟಿಯಿಂದ ಸುಮಾರು ಹದಿನೈದು ವರ್ಷಗಳ ಹಿಂದೆ ಸಿರಿಗನ್ನಡ ಗೆಳೆಯರ ಬಳಗವನ್ನು ಹುಟ್ಟು ಹಾಕಿದರು.ನವರಾತ್ರಿ ಯಂದು ಶಾರದೆಯನ್ನು ಪ್ರತಿಷ್ಠಾಪಿಸಿ ದೇವತಾ ಕಾರ್ಯ ಧಾರ್ಮಿಕ ವಿಧಿ ಅನ್ನಸಂತರ್ಪಣೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಸಂಯೋಜಿಸಿ ಸಮಾಜದಲ್ಲಿ ಅನೇಕ ವಿಧಗಳಲ್ಲಿ ಸೇವೆಗೈದ ಸಾಧನೆ ಮಾಡಿದ ಮಹನೀಯರ ನ್ನು ಸನ್ಮಾನಿಸಿ ಅವರ ಸಾಧನೆಗೆ ಬೆನ್ನು ತಟ್ಟುವ ಮಹಾನ್ ಕಾರ್ಯವನ್ನು ಬಳಗ ನಡೆಸಿ ಕೊಂಡು ಬರುತ್ತಿದೆ
ಅಂತೆಯ ಈ ವರ್ಷ ಶಿರೂರು ದುರಂತದ ರಕ್ಷಣಾ ಕಾರ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಈಶ್ವರ ಮಲ್ಪೆ,ನಿವರತ್ತ ಯೋದ ನಾಗರಾಜ ದೇವಾಡಿಗ, ಉತ್ತಮ ಶಿಕ್ಷಕ ವಿನಾಯಕ ನಾಯ್ಕ, ಸಮಾಜ ಸೇವಕ ಡಾ ಅಮಿನುದ್ದಿನ್ ಗೌಡ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಜಯಂತ ಮೂಡಲಮನೆ, ವೃದ್ಧರ ಆಶ್ರಯ ದಾತ ನಾಗರಾಜ ನಾಯ್ಕ ಸಿದ್ದಾಪುರ, ಮಾತೃ ಭಕ್ತಿಗೆ ಹೆಸರಾದ ಪ್ರವೀಣ ಮುರುಡೇಶ್ವರ ಮೊದಲಾದ ಸಾಧಕರನ್ನು ಕರೆದು ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡಿದ್ದು ವಿದ್ವಜ್ಜನರನ್ನು ಹುಬ್ಬೆರಿಸುವಂತೆ ಮಾಡಿದೆ.


ಬೆಳೆಯುವ ಮಕ್ಕಳಿಗಾಗಿ ಅನೇಕ ಆಟೋಟ ಸ್ಪರ್ಧೆಗಳು ಶಿಕ್ಷಣದಲ್ಲಿ ಸಾಧನೆಗೈದ ಮಕ್ಕಳನ್ನು ಪ್ರೊತ್ಸಾಹಿಸುವ ಕಾರಗಯವನ್ನು ಮಾಡುತ್ತಾ ಬರುತ್ತಿದೆ.
ಕೊನೆಯ ದಿನ ಶಾರದೆಯ ಭವ್ಯ ಮೂರ್ತಿಯೊಂದಿಗೆ ನಡೆದ ದಸರಾ ಮೆರವಣಿಗೆ ಜಿಲ್ಲೆಯಲ್ಲಿಯೇ ಹೊಸದೊಂದು ಸಂಚಲನ ಮೂಡಿಸಿದಂತೂ ಸುಳ್ಳಲ್ಲ. ಮೈಸೂರು ದಸರಾ ಮಾದರಿಯಲ್ಲಿ ಸಾಂಸ್ಕೃತಿಕ ಜನಪದ ಲೋಕವನ್ನೇ ಮೆರವಣಿಗೆಯಲ್ಲಿ ತಂದು ನಿಲ್ಲಿಸಿದ ಶ್ರೇಯಸ್ಸು ಸಿರಿಗನ್ನಡ ಗೆಳೆಯರ ಬಳಗದ್ದಾಗಿದೆ. ಗದಗದ ವೀರಗಾಸೆ ಕುಣಿತ, ಡೊಳ್ಳು ಕುಣಿತ, ಸುಮಾರು ಎಪ್ಪತ್ತು ಜನರ ತಂಡದೊಂದಿಗೆ ಬಂದ ದಕ್ಷಿಣ ಕನ್ಬಡ ಗಂಗೊಳ್ಳಿಯ ಕುಣಿತ ಭಜನೆ, ಜಿಲ್ಲೆಯ ಸುಗಮಸಂಗೀತ ಕ್ಷೇತ್ರದ ಪ್ರತಿಭಾನ್ವಿತ ಕಲಾವಿದ ಉಮೇಶ ಮುಂಡಳ್ಳಿ ಅವರ ನಿನಾದ ಸಂಗೀತ ಸಂಚಯದ ಭಕ್ತಿ ಗಾನಾಮೃತ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಅಯೋಜಿಸುವ ಮೂಲಕ ಇಡಿ ಮೆರವಣಿಗೆಯು ಮೈಸೂರು ದಸರಾವನ್ನೇ ಕಣ್ಮುಂದೆ ನೆನಪಿಸುವಂತೆ ಮಾಡಿದವು.
ಬೈಲೂರು ಹವ್ಯಕ ಕಲ್ಯಾಣ ಮಂಟಪದಿಂದ ಸಂಜೆ ಆರೂವರೆ ಸುಮಾರಿಗೆ ಪ್ರಾರಂಭವಾದ ದಸರಾ ಮೆರವಣಿಗೆ ಶ್ರೀ ಕ್ಷೇತ್ರ ಮುರುಡೇಶ್ವರ ದೇವಾಲಯದ ರಾಜಗೋಪುರಕ್ಕೆ ಬರುವಾಗ ಬರೊಬ್ಬರಿ ೧೨ ಗಂಟೆ. ಸುದೀರ್ಘ ಮೆರವಣಿಗೆ ಎಲ್ಲರ ಮೆಚ್ವುಗೆ ಪಡೆಯುತ್ತಾ ಮುರುಡೇಶ್ವರ ಕಡಲಲ್ಲಿ ಶಾರದೆಯ ವಿಸರ್ಜನೆಯೊಂದಿಗೆ ಸಂಪನ್ನವಾಯಿತು.

Related

Previous Post

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಉಪ ತಹಶೀಲ್ದಾರ್ ಸುಧಾ

Next Post

ಶಿರಸಿ ಪ್ರತ್ಯೇಕ ಜಿಲ್ಲೆಯಾಗುವುದು ಅನಿವಾರ್ಯ , ಬ್ರಹತ ಹೋರಾಟ ಶುರು- ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ

Kannada News Desk

Kannada News Desk

Next Post
ಶಿರಸಿ ಪ್ರತ್ಯೇಕ ಜಿಲ್ಲೆಯಾಗುವುದು ಅನಿವಾರ್ಯ , ಬ್ರಹತ ಹೋರಾಟ ಶುರು- ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ

ಶಿರಸಿ ಪ್ರತ್ಯೇಕ ಜಿಲ್ಲೆಯಾಗುವುದು ಅನಿವಾರ್ಯ , ಬ್ರಹತ ಹೋರಾಟ ಶುರು- ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ

Please login to join discussion

ಕ್ಯಾಲೆಂಡರ್

May 2025
M T W T F S S
 1234
567891011
12131415161718
19202122232425
262728293031  
« Apr    

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.