ಭಟ್ಕಳದಲ್ಲಿ ಸಾಗರ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ- ಆಟೋ ಪ್ರಯಾಣಿಕರಿಗೆ ಗಾಯ ,ಮಣಿಪಾಲ್ ಆಸ್ಪತ್ರೆಗೆ ದಾಖಲು
ಭಟ್ಕಳ- ತಾಲೂಕಿನ ಸಾಗರ ರಸ್ತೆಯ ಕಡವಿನಕಟ್ಟೆ ಕ್ರಾಸ್ ಸಮೀಪ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ.
ಆಟೋ ಚಾಲಕ ಜಟ್ಟಾ ನಾಯ್ಕ ಮತ್ತು ಪ್ರಯಾಣಿಕರಾಧ ಜಯಂತಿ ಪೈ ಹೊನ್ನಾವರ ಬಳಕೂರು ನಿವಾಸಿ ಇವರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು. ಇನ್ನುಳಿದ ಸತೀಶ್ ರಾಮಚಂದ್ರ ಹುನ್ಸ್ವಾಡ್ಕರ್,ಸೌಮ್ಯ ಸತೀಶ್ ಹುನ್ಸ್ವಾಡ್ಕರ್,ಹಳಿಯಾಳ ನಿವಾಸಿ ಗಳಾಗಿದ್ದು ಹಾಗೂ ಮಹಾಲಕ್ಷ್ಮೀ ಕಿಣಿ ಹಲ್ಯಾಣಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆಎಂದು ತಿಳಿದು ಬಂದಿದೆ. ಇವರು ಆಟೋದಲ್ಲಿ ಭಟ್ಕಳ ಕಡೆಗೆಯಿಂದ ಹಲ್ಯಾಣಿ ಕಡೆಗೆ ಹೋಗುತ್ತದ್ದ ವೇಳೆ ಸಾಗರ ರಸ್ತೆಯಲಿರುವ ಬಸ್ ಡಿಪ್ಪೋದಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ್ ಮತ್ತು ಉಡುಪಿ ಖಾಸಗಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.ಅಪಘಾತ ಸ್ಥಳಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.