ಯುವಪೀಳಿಗೆಯನ್ನು ಮದ್ಯ ವ್ಯಸನದತ್ತ ತಳ್ಳುತ್ತಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ಭಟ್ಕಳದಲ್ಲಿ ವೆಲ್ಫರ್ ಪಾರ್ಟಿ ಪ್ರತಿಭಟನೆ
ಭಟ್ಕಳ-ಅಬಕಾರಿ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ರಾಜ್ಯ ಸರ್ಕಾರ ಯುವ ಪೀಳಿಗೆಯನ್ನು ಮಧ್ಯ ವ್ಯಸನಕ್ಕೆ ತಳ್ಳುತ್ತಿರುವ ಕ್ರಮ ಖಂಡನೀಯ.
ನಗರದ ಶಮ್ಸುದ್ದೀನ್ ಸರ್ಕಲ್ ಬಳಿ ಇರುವ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲು, ಯುವಕರನ್ನು ವ್ಯಸನಕ್ಕೆ ದೂಡಿ ಅರಾಜಕತೆ ಸೃಷ್ಟಿಸುವ ಹುನ್ನಾರಕ್ಕೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತಿರ್ವವಾಗಿ ವಿರೋಧಿಸುತ್ತದೆ.
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಈಗಾಗಲೇ ಕುಡಿತ ಹಲವು ಕುಟುಂಬಗಳನ್ನು ಬೀದಿ ಪಾಲು ಮಾಡಿದೆ.
ಕೂಡಲೇ ಸರಕಾರ ಕರ್ನಾಟಕ ಅಬಕಾರಿ ಪರವಾನಿಗೆ ನಿಯಮಗಳು 1967ರ ವಿಧೇಯಕಕ್ಕೆ ತಿದ್ದುಪಡಿ ತರುವ ವಿಚಾರ ಕೈ ಬಿಡಬೇಕು. ರಾಜ್ಯದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಹಾಗೂ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು
ಈ ಸಂದರ್ಭದಲ್ಲಿಫಾರೂಕ್ ಶೇಕ್
ಜಿಲ್ಲಾಧ್ಯಕ್ಷರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉತ್ತರ ಕನ್ನಡ,ಆಸಿಫ್ ಶೇಕ್
ಜಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ಭಟ್ಕಳ ವಿಧಾನಸಭಾ ಘೋಷಿತ ಅಭ್ಯರ್ಥಿ,ಅಬ್ದುಲ್ ಜಬ್ಬಾರ್ ಅಸದಿ
ಜಿಲ್ಲಾ ಉಪಾಧ್ಯಕ್ಷರು
ಮುಖಂಡರಾದ ಅಬ್ದುಲ್ ಮಾಜಿದ್ ಕೋಲಾ, ಜಹೂರ್ ಲಾಟ್, ಕಮ್ರುದ್ದೀನ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.