ಕಾರವಾರ-ಕಾರವಾರ ತಾಲ್ಲೂಕಿನ ಶಿರವಾಡ ಕೈಗಾರಿಕಾ ಪ್ರದೇಶದಲ್ಲಿ ಮುಖ್ಯ ರಸ್ತೆಯ ಅಂಚಿನ ಭೂಮಿಯ ಆಳದಿಂದ ಕೆ. ವಿ 10 ವಿದ್ಯುತ್ ತಂತಿ ಮಾರ್ಗ ನನ್ನು ಅಳವಡಿಸಲು ಜೆಸಿಬಿ ಮೂಲಕ ರಸ್ತೆ ಬದಿಯಲ್ಲಿ ಹಾಗೂ ರಸ್ತೆ ತಿರುವಿನ ಮಧ್ಯದಲ್ಲಿ ಅಗೆದು ವಿದ್ಯುತ್ ತಂತಿ ಮಾರ್ಗದ ಪೈಂಪ್ ಗಳು ಹಾಕುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆ ತಿರುವಿನ ಮಧ್ಯದಲ್ಲಿ ಡಾಂಬರು ರಸ್ತೆ ಅಗೆದು ಹಾಕಿ ಆಳದಲ್ಲಿ ಪೈಂಪ್ ಗಳು ಹಾಕಿ ಮಣ್ಣು ಮುಚ್ಚಿ ಹಾಕಲಾಗಿದೆ. ಕೆಲವು ಕಡೆಗಳಲ್ಲಿ ತೋಡಿದ ಹೊಂಡ ಹಾಗೆ ಮುಚ್ಚದೇ ಬೀಡಲಾಗಿದೆ.. ಯಾವುದಾದರೂ ರಾತ್ರಿ ವಾಹನಗಳು ಹೊಂಡದಲ್ಲಿ ಬಾರಿ ದುರಂತ ಸಂಭವಿಸಲಿದೆ. ಮತ್ತು ಬಾರಿ ಮಳೆಗೆ ವಾಹನಗಳು ಹುಗಿದು ಬೀಳುವುದಲ್ಲದೇ ಸ್ಕೂಟಿ ಬೈಕ್ ಸವಾರರು ಸ್ಕಿಡ್ ಆಗಿ ಬಿದ್ದು ಅಪಘಾತ ಸಂಭವಿಸುತ್ತಿವೆ. ಆದರೆ ಸಂಬಂಧ ಪಟ್ಟ ಕಾಮಗಾರಿ ಕೈಗೊಡವರು ಸರಿಯಾದ ಕ್ರಮ ಕೈಗೊಳ್ಳದೇ ಇರುವುದರಿಂದ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸ್ವರೂಪ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಪುನಃ ಕಾಮಗಾರಿ ಮಾಡಬೇಕೆಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಅವರು ಮನವಿ ಸಲ್ಲಿಸಿದರು.ಸರ್…. ಮನವಿ ನೀಡಿದ ನಂತರ ಈಗ ರಸ್ತೆ ಬದಿಯಲ್ಲಿ ತೋಡಿದ ಹೊಂಡಕ್ಕೆ ಮಣ್ಣು ಹಾಕುವ ಕೆಲಸ ಮಾಡುತ್ತಿದ್ದಾರೆ.. ಆದರೆ ರಸ್ತೆ ಸಂಪೂರ್ಣ ಹಾಳಾಗಿದ್ದು. ಮಳೆ ಸುರಿಯುವ ಕಾರಣ ರಸ್ತೆ ಕೆಸರುಮಯವಾಗಿದೆ. ವಾಹನ ಸವಾರರು ಜೀವ ಕೈ ಹಿಡಿದು ಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಅವರು ತಿಳಿಸಿದ್ದಾರೆ.