ರಾಜ್ಯ ಮಟ್ಟದ ಕಲಾ ಪ್ರದರ್ಶನಕ್ಕೆ ಶಾಸಕ ಡಾ, ವೀರಣ್ಣ ಚರಂತಿಮಠ ರಿಂದ ಚಾಲನೆ:ಶಿರಸಂಗಿಯಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ:ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರಧಾನ ಸಮಾರಂಭ
ಶಿರಸಂಗಿ : ವಿಶ್ವಕರ್ಮ ಪೂಜಾ ಮಹೋತ್ಸವ ಅಂಗವಾಗಿ ಶಿರಸಂಗಿ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ, ವಿಶ್ವಕರ್ಮ ಪ್ರತಿಷ್ಠಾನ ಶಿರಸಂಗಿ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಕಲಾ ಪ್ರದರ್ಶನ 2022 ಕ್ಕೆ ಬಾಗಲಕೋಟೆ ಶಾಸಕರಾದ ಡಾ, ವೀರಣ್ಣ ಚರಂತಿಮಠ ಅವರು ಚಾಲನೆ ನೀಡಿದರು.
ಅರೆಮಾದನಹಳ್ಳಿ ಶಿವ ಸುದ್ನಾನಪೀಠದ ಪೂಜ್ಯರಾದ ಶಿವಸುದ್ನಾನಮಹಾಸ್ವಾಮಿಗಳು ಹಾಗೂ ಚಂದ್ರಶೇಖರ ಸ್ವಾಮಿಗಳು,ತೇರದಾಳ ಶಾಸಕರಾದ ಸಿದ್ದು ಸವದಿ, ವಿಧಾನ ಪರಿಷತ್ತ ಸದಸ್ಯರಾದ ಎಸ್,ವಿ ಸಂಕನೂರ,ವಿಶ್ವಕರ್ಮ ವಿಕಾಸ್ ಸಂಸ್ಥೆ ಅಧ್ಯಕ್ಷರಾದ ಪಿ. ಬಿ ಬಡಿಗೇರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಚಿತ್ರ ಕಲಾವಿದರು,ಶಿಲ್ಪಕಲಾವಿದರು, ಕಂಚು ಕಲಾವಿದರು, ಕಾಸ್ಟಶಿಲ್ಪ ಕಲಾವಿದರು. ಛಾಯಾಗ್ರಾಹಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಭಾಗವಹಿಸಿದ್ದಾರೆ.
ವರದಿ:ಶರಣಪ್ಪ ಹೆಳವರ,ಬಾಗಲಕೋಟೆ