ಭಟ್ಕಳ- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಜೆಡಿಎಸ್ ಮುಖಂಡ ಇನಾಯಿತುಲ್ಲ ಶಾಬಂದ್ರಿ ಅವರು ಶುಕ್ರವಾರ ಕುಮಟಾ ದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬ್ರಹತ ಸಮಾವೇಶ ದಲ್ಲಿ ತನ್ನ ಅಪಾರ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಪಿ.ಸಿ.ಸಿ ರಾಜ್ಯ ಅಧ್ಯಕ್ಷ , ಡಿ.ಸಿ.ಎಂ ಶಿವಕುಮಾರ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಇನಾಯಿತುಲ್ಲ ಶಾಬಂದ್ರಿ ಈ ಹಿಂದೆ ಭಟ್ಕಳ ಪುರಸಭೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 2013 ರಲ್ಲಿ ಜೆಡಿಎಸ್ ಪಕ್ಷದಿಂದ ಭಟ್ಕಳ ವಿಧಾನಸಭಾ ಕ್ಷೇತ್ರದಿಂದ ವಿಧಾನಸಬೆ ಚುನಾವಣೆ ಗೆ ಸ್ಪರ್ದಿಸಿ 27 ಸಾವಿರ ಮತಗಳ ನ್ನು ಪಡೆದು 2 ನೆ ಸ್ಥಾನ ಗಳಿಸಿದರು. ಈ ಹಿಂದ ಹಲವು ದಶಕಗಳ ಕಾಲ ಇನಾಯಿತುಲ್ಲಾ ಶಾಬಂದ್ರಿಅವರು ಜೆಡಿಎಸ್ ಪಕ್ಷದ ಭಟ್ಕಳ ತಾಲೂಕ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಪ್ತ ಬಳಗದಲ್ಲಿ ಗುರುತಿಸಿ ಕೊಂಡಿದ್ದರು. ಪ್ರಸ್ತುತ ಭಟ್ಕಳ ಮುಸ್ಲಿಂ ಪರಮೋಚ್ಚ ಸಂಸ್ಥೆಯಾದ ತಂಜಿಮ್ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.