ಮಂಗಳೂರು-ಕೂಳೂರು ಸೇತುವೆ ಬಳಿ ಭಾನುವಾರ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಯಿದಿನ್ ಬಾವರ ಸಹೋದರ, ಉದ್ಯಮಿ ಮುತ್ತಾಝ್ ಅಲಿ ಅವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಸೋಮವಾರ ಪತ್ತೆಯಾಗಿದೆ.ಭಾನುವಾರ ಮುಂಜಾನೆ 3 ಗಂಟೆಗೆ ಮನೆಯಿಂದ ಹೊರಟಮುತ್ತಾಝ್ ಅಲಿ ಅವರ ಕಾರು ಕೂಳೂರು ಸೇತುವೆ ಬಳಿ ಪತ್ತೆಯಾಗಿತ್ತು.ಆಲಿ ಅವರ ಮೃತದೇಹವನ್ನು ನಗರದ ಎಜೆ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.
ನಿನ್ನೆ ಯಿಂದ ಕಾಣೆಯಾಗಿದ್ದ ಮುಮ್ತಾಜ್ ಅಲಿ ರವರ ರವರ ಮೃತ ದೇಹ ಕೂಳೂರು ನದಿ ಸಮೀಪ ಪತ್ತೆಯಾಗಿದ್ದು ಪೋಸ್ಟ್ ಮಾರ್ಟಮ್ ಗಾಗಿ ಏಜೆ ಆಸ್ಪತ್ರೆಗೆ ರವಾನೆ ಆಗಿದ್ದು, ವೀಕ್ಷಣೆ,ಸ್ನಾನ ಇಂದು ಕೃಷ್ಣಾಪುರ ಅವರ ಮನೆಯಲ್ಲಿ ನಡೆಯಲಿದೆ, ಮತ್ತು ಸಂಜೆ 04.00 ಘಂಟೆಗೆ ಕೃಷ್ಣಾಪುರ ಈದ್ಗಾ ಮಸೀದಿಯಲ್ಲಿ ಧಫನ ಕಾರ್ಯ ನಡೆಯಲಿದೆ.