
ಭಟ್ಕಳ: ಅಂಜುಮಾನ್ ಬಿಎಡ್ ಕಾಲೇಜಿನಲ್ಲಿ ಆಂತರಿಕ ಕಲಹ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಕಾಲೇಜಿನ ಪ್ರಾಚಾರ್ಯೆ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ಆಡಳಿತ ಮಂಡಳಿಯ ಕೆಲ ಸದಸ್ಯರಿಂದ ವೃತ್ತಿಪರ ಮತ್ತು ವೈಯಕ್ತಿಕ ಹಿಂಸೆ ಅನುಭವಿಸುತ್ತಿದ್ದೇನೆ ಎಂದು ಗಂಭೀರ ಆರೋಪ ಹೊರಟ್ಟಿದ್ದು, ವಿಷಯ ಇದೀಗ ಕೋರ್ಟ್ ಮತ್ತು ಪೊಲೀಸರ ಹಂತ ತಲುಪಿದೆ.

2003ರಿಂದ ಅಂಜುಮಾನ್ ಹಮಿ-ಎ-ಮುಸ್ಲಿಮಿನ್ ಟ್ರಸ್ಟ್ಗೆ ಸೇವೆ ಸಲ್ಲಿಸುತ್ತಿರುವ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು 2016ರಲ್ಲಿ ಬಿಎಡ್ ವಿಭಾಗದ ಪ್ರಾಚಾರ್ಯೆಯಾಗಿಯೂ ನೇಮಕಗೊಂಡಿದ್ದರು. ಅವರ ಹೇಳಿಕೆ ಪ್ರಕಾರ, ಕಳೆದ ವರ್ಷ ಟ್ರಸ್ಟ್ನ ಬಿಎಡ್ ವಿಭಾಗದ ಕಾರ್ಯದರ್ಶಿಯಾಗಿ ಅಹಿದ್ ಮೊಹ್ತೆಶಾಮ್ ಅಧಿಕಾರ ಸ್ವೀಕರಿಸಿದ ನಂತರ ಸಮಸ್ಯೆಗಳು ಶುರುವಾಯ್ತು.

ಪ್ರಾಚಾರ್ಯೆಯ ದೂರಿನ ಪ್ರಕಾರ, ಕಾರ್ಯದರ್ಶಿ ಮೊಹ್ತೆಶಾಮ್ ಅವರು ಕಾಲೇಜಿನ ಕೆಲಸಕ್ಕೆ ಸಂಬಂಧಿಸದ ಒತ್ತಡಗಳನ್ನು ಹಾಕಿ, ತಮ್ಮ ಬೇಡಿಕೆಗಳನ್ನು ಪೂರೈಸಿದರೆ ಹುದ್ದೆಯಲ್ಲಿ ಅನುಕೂಲತೆ ನೀಡುವ ಭರವಸೆ ನೀಡಿದ್ದಾರೆ. ಆದರೆ ಇದಕ್ಕೆ ಒಪ್ಪದಿದ್ದಾಗ, ಅವರ ವಿರುದ್ಧ ನಿಂದಾಸ್ಪದ ವದಂತಿಗಳನ್ನು ಹಬ್ಬಿಸುವ ಮೂಲಕ ಮಾನಹಾನಿ ಮಾಡಲು ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಘಟನೆಗಳಲ್ಲಿ ಕಮಿಟಿ ಸದಸ್ಯರಾದ ಸಜ್ಜದ್ ಕೋಲಾ ಹಾಗೂ ಇಸಾಕ್ ಶಬಂದ್ರಿ ಖಾಜಾ ಮಹ್ಮದ್ ಗೌಸ್ ಸಹ ಭಾಗವಹಿಸಿದ್ದಾರೆ ಎಂಬುದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇವರ ಸಂಯುಕ್ತ ಒತ್ತಡದಿಂದ ತನ್ನ ಕೆಲಸದ ವಾತಾವರಣವೇ ಅಸಹ್ಯಕರವಾಗಿದೆ ಎಂದು ಪ್ರಾಚಾರ್ಯೆ ಹೇಳಿದ್ದಾರೆ.

ಮಾರ್ಚ್ 9ರಂದು ಕಾಲೇಜು ಆವರಣದಲ್ಲಿ ಪ್ರಾಚಾರ್ಯೆ ಅವರನ್ನು ಕೈ ಹಿಡಿದು ಎಳೆಯುವ ಘಟನೆ ನಡೆದಿರುವುದಾಗಿ ಜಿಕ್ರಿಯಾ ಸುಲ್ತಾನ್ ಹಜಾರಿ ಅವರು ತಿಳಿಸಿದ್ದು, ಈ ಸಂಬಂಧ ಕೋರ್ಟ್ ಶರಣಾಗಿದ್ದು, ನ್ಯಾಯಾಲಯದ ನಿರ್ದೇಶನದ ಮೇರೆಗೆ ಭಟ್ಕಳ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಅಂಜುಮಾನ್ ಶಿಕ್ಷಣ ಸಂಸ್ಥೆಯ ಆಂತರಿಕ ಪರಿಸ್ಥಿತಿಯ ಬಗ್ಗೆ ಈ ಪ್ರಕರಣ ಮತ್ತೊಮ್ಮೆ ಸಂಭ್ರಮಕ್ಕೆ ಕಾರಣವಾಗಿದ್ದು, ಮಹಿಳಾ ಸಿಬ್ಬಂದಿ ಭದ್ರತೆ ಮತ್ತು ಆಡಳಿತ ಕ್ರಮಗಳ ಕುರಿತ ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ.

