ಜಮೀನು ದಾಖಲೆಗೆ ಲಂಚಕ್ಕೆ ಬೇಡಿಕೆ ಇಟ್ಟ ತಹಶೀಲ್ದಾರ – ಆಡಿಯೋ ವೈರಲ್
ಯಾದಗಿರಿ -ಯಾದಗಿರಿ ಜಿಲ್ಲೆಯ ಗುರುಮಠಕಲ್ ತಹಶೀಲ್ದಾರ ವಿರುದ್ಧ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆರೋಪವೊಂದು ಕೇಳಿ ಬಂದಿದೆ.
ಗುರುಮಠಕಲ್ ತಹಶೀಲ್ದಾರ ಆಗಿರುವ ಶರಣಬಸವ ಒಂದು ಲಕ್ಷಕ್ಕೂ ಅಧಿಕ ಹಣ ಕೊಟ್ಟರೆ ಮಾತನಾಡಿ ಇಲ್ಲವೆಂದರೆ ಬೇಡ ಎಂದಿರುವ ಆಡಿಯೋ ವೈರಲ್ ಆಗಿದೆ.
ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದ 1131, 1132ರ ಸರ್ವೇ ನಂಬರ್ನ ಜಮೀನು ಸಂಬಂಧ ಹಳ್ಳಿಯ ಜನರಿಂದ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಮೀನಿನ ದಾಖಲೆ, ಸಿಂಧುತ್ವ ಸಂಬಂಧ ಲಕ್ಷಕ್ಕೂ ಅಧಿಕ ಹಣದ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.
‘ನನ್ನ ಏಳಿಗೆ ಸಹಿಸದವರು ಈ ಪಿತೂರಿ ಮಾಡಿದ್ದಾರೆ. ಈಗ ವೈರಲ್ ಆಗಿರುವ ಆಡಿಯೋ ನನ್ನದಲ್ಲ’ ಎಂದು ತಹಶೀಲ್ದಾರ ಶರಣಬಸವ ಅವರು ಆರೋಪವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ಸಂಭಾಷಣೆಯು ಮಿಮಿಕ್ರಿ ಮಾಡಿ ವೈರಲ್ ಮಾಡಿರಬಹುದು ಎಂದು ತಿಳಿಸಿದ್ದಾರೆ.