ಸಂವಿಧಾನ ಭದ್ದ ಭೂಮಿ ಹಕ್ಕು ನೀಡಲು ಭದ್ದತೆ ಪ್ರದರ್ಶಿಸಿ – ರವೀಂದ್ರ ನಾಯ್ಕ
ಶಿರಸಿ : ಭೂಮಿ ಹಕ್ಕು ಸಂವಿಧಾನ ಭದ್ದ ಹಕ್ಕು. ಸಂವಿಧಾನ ಬದ್ದ ಭೂಮಿ ಹಕ್ಕು ನೀಡಲು ಸರಕಾರ ಭದ್ದತೆ ಪ್ರದರ್ಶಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಅವರು ಇಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ೭೮ ನೇ ಸ್ವತಂತ್ರೋತ್ಸವದ ದ್ವಜಾರೋಹಣ ನಂತರ ಮೇಲಿನಂತೆ ಹೇಳಿದರು.
ಜಾತ್ಯಾತ್ಯತೆಯ ತತ್ವದ ಅಡಿಯಲ್ಲಿ, ಧಾರ್ಮಿಕ ಭಾವನೆಯ ಮೌಲ್ಯವನ್ನು ಎತ್ತಿ ಹಿಡಿಯಲು ಯುವ ಸಮೂಹ ಪ್ರಯತ್ನಿಸಲಿ ಎಂದು ಈ ಸಂದರ್ಭದಲ್ಲಿ ಯುವಕರಿಗೆ ಕರೆ ನೀಡಿದರು. ಈ ¸ಂದರ್ಭದಲ್ಲಿ ಸಾಮಾಜಿಕ ಧುರಿಣ ಸತೀಶ ನಾಯ್ಕ, ಹೋರಾಟಗಾರ ಇಬ್ರಾಹಿಂ ಸಾಬ ಗೌಡಳ್ಳಿ, ಹಿರಯ ವಕೀಲರಾದ ಉದಯ ನಾಯ್ಕ,ಸಜೀವ ಶೆಟ್ಟಿ ಗಣೇಶನಗರ, ಚೇತನ ಭೋವಿ, ದನಂಜಯ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.